ದತ್ತ ಮಾಲಾಧಾರಿಗಳ ಬಸ್ ಗೆ ಕಲ್ಲೆಸೆತ ಪ್ರಕರಣ ಹಿನ್ನೆಲೆ ➤ ಬಂದ್ ಗೆ ಕರೆಕೊಟ್ಟ ಹಿಂದೂಸಂಘಟನೆ

(ನ್ಯೂಸ್ ಕಡಬ) newskadaba.com ಕೋಲಾರ, ನ. 17. ದತ್ತಪೀಠಕ್ಕೆ ತೆರಳುತ್ತಿದ್ದ ದತ್ತ ಮಾಲಾಧಾರಿಗಳ ಬಸ್ಸಿಗೆ ಕಲ್ಲು ತೂರಾಟ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ನಾಳೆ (ನ. 18) ಕೋಲಾರ ಬಂದ್ ಗೆ ಕರೆ ನೀಡಿದೆ.

ಇದರ ಜೊತೆಗೆ ಹಿಂದೂಪರ ಸಂಘಟನೆಗಳು ಮಹಾತ್ಮಾ ಗಾಂಧಿ ವೃತ್ತದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಲಿದೆ. ಕಳೆದ ಶನಿವಾರದಂದು ನಗರದ ಎಂ.ಬಿ ರಸ್ತೆಯ ವಿಶಾಲ್ ಮಾರ್ಟ್ ಎದುರು ಚಿಕ್ಕಮಗಳೂರಿನ ದತ್ತಪೀಠಕ್ಕೆ ತೆರಳುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದಿತ್ತು.

Also Read  ಸಂಚು ರೂಪಿಸುತ್ತಿದ್ದ ರೌಡಿ ಗ್ಯಾಂಗ್ ಮೇಲೆ ಸಿಸಿಬಿ ದಾಳಿ ➤ ನೆಲ್ಯಾಡಿಯ ವ್ಯಕ್ತಿ ಸೇರಿದಂತೆ 11 ಮಂದಿಯ ಬಂಧನ

error: Content is protected !!
Scroll to Top