ಸುಳ್ಯ: ಪ್ರವಾದಿಯನ್ನು ನಿಂದಿಸಿದಾತನ ಬಂಧನಕ್ಕೆ ಎಸ್ಡಿಪಿಐ ಆಗ್ರಹ

(ನ್ಯೂಸ್ ಕಡಬ) newskadaba.com ಸುಳ್ಯ, ನ. 05. ಪ್ರವಾದಿ ಮುಹಮ್ಮದ್ (ಸ.ಅ)ರನ್ನು ಅಶ್ಲೀಲ ಪದಗಳಿಂದ‌ ನಿಂದಿಸಿ‌, ಕೋಟ್ಯಾಂತರ ಜನರ‌ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಜಗದೀಶ ಐವರ್ನಾಡು ಎಂಬಾತನಮೇಲೆ ಜಿಲ್ಲಾ ಪೋಲಿಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಕ್ಬಾಲ್ ಬೆಳ್ಳಾರೆ ಒತ್ತಾಯಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿದ ಅವರು, ಪ್ರವಾದಿವರ್ಯರ ವಿರುದ್ಧ ಜಗದೀಶ ಐವರ್ನಾಡು ಎಂಬಾತ ಅಶ್ಲೀಲ ಪದಗಳಿಂದ ನಿಂದಿಸಿದ್ದಾನೆ. ಜಿಲ್ಲಾ ಪೋಲಿಸರು ಕೂಡಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಬೇಕು, ಸಮಾಜದ ಸ್ವಾಸ್ಥ್ಯವನ್ನು ಕದಡಲು ಪ್ರಯತ್ನಿಸುವ ಕಿಡಿಗೇಡಿಗಳ ವಿರುದ್ಧ ಮೃದು ಧೋರಣೆ ತಾಳದೆ ಕಠಿಣ ಕಾನೂನು ಕ್ರಮ ಕೈಗೊಂಡು ಅಶಾಂತಿಯನ್ನು ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

Also Read  ವನ್ಯ ಪ್ರಾಣಿ ಬೇಟೆ- ಇಬ್ಬರ ಬಂಧನ ! -ನಾಲ್ವರು ಪರಾರಿ

error: Content is protected !!
Scroll to Top