ದುಷ್ಕರ್ಮಿಗಳಿಂದ ಆಟೋ ಚಾಲಕನ ಬರ್ಬರ ಹತ್ಯೆ..!

(ನ್ಯೂಸ್ ಕಡಬ) Newskadaba.com ಮಂಡ್ಯ, ಅ. 27. ಆಟೋ ಚಾಲಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರ ಹತ್ಯೆಗೈದಿರುವ ಘಟನೆ ಮಂಡ್ಯ ಜಿಲ್ಲೆಯ ಕೆ. ಆರ್ ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದೆ.


ಕೊಲೆಯಾದ ಅಟೋ ಚಾಲಕನನ್ನು ನಾಸಿರ್ ಅಹಮದ್ (30) ಎಂದು ಗುರುತಿಸಲಾಗಿದೆ. ಆಲಂಬಾಡಿಕಾವಲು ದರ್ಗಾ ಸಮೀಪದ ನಿರ್ಜನ ಪ್ರದೇಶವೊಂದರಲ್ಲಿ ಈ ಕೃತ್ಯ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ನಿಖರ ಕಾರಣವೇನೆಂದು ತಿಳಿದುಬಂದಿಲ್ಲ. ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Also Read  ನಟ ದರ್ಶನ್ ಸೆಲ್ ಗೆ ಟಿವಿ ಅಳವಡಿಕೆ

error: Content is protected !!
Scroll to Top