ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾಟಕ್ಕೆ ► ಹೊಸ್ಮಠದ ಹುಸೇನ್ ಅಝ್ಮಾಲ್ ಆಯ್ಕೆ 

(ನ್ಯೂಸ್ ಕಡಬ) newskadaba.com ಕಡಬ, ನ.01. ಬೆಂಗಳೂರಿನ ಚಾಮರಾಜಪೇಟೆಯ ಮಕ್ಕಳ ಕ್ರೀಡಾಕೂಟ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ 29ನೇ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾಟಕ್ಕೆ ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಹುಸೇನ್ ಅಝ್ಮಾಲ್ ಆಯ್ಕೆಯಾಗಿದ್ದಾರೆ.

ಇವರು ನವೆಂಬರ್ 4ರಿಂದ 7ರವರೆಗೆ ಜಾರ್ಖಂಡ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಸಬ್ ಜ್ಯೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸುವ ದ.ಕ. ಜಿಲ್ಲೆಯ ಏಕೈಕ ಕ್ರೀಡಾಪಟುವಾಗಿದ್ದಾರೆ. ಇವರಿಗೆ ಕಡಬ ಸೈಂಟ್ ಜೋಕಿಮ್ಸ್‌ ಪ್ರೌಢ ಶಾಲಾ ದೈಹಿಕ ಶಿಕ್ಷಕರಾದ ಆನಂದ ಪಿ. ತರಬೇತಿ ಹಾಗೂ ಕೋಚಿಂಗ್ ತರಬೇತಿಯನ್ನು ಮುಶ್ರಾನ್, ಫೈಝಲ್, ಸಮೀರ್, ಇವರು ನೀಡಿರುತ್ತಾರೆ ಇವರು ದೇರಾಜೆ-ಹೊಸ್ಮಠದ ನಿವಾಸಿ ಕೆ.ಕೆ.ಕರೀಂ ಮತ್ತು ಅಸ್ಮಾರವರ ಪುತ್ರ.

error: Content is protected !!

Join the Group

Join WhatsApp Group