ನೇಣು ಬಿಗಿದ ಸ್ಥಿತಿಯಲ್ಲಿ ಜೆಡಿಎಸ್ ಮುಖಂಡನ ಶವ ಪತ್ತೆ ► ಕೊಲೆ ಶಂಕೆ

(ನ್ಯೂಸ್ ಕಡಬ) newskadaba.com ಹಾಸನ, ನ.01. ಜೆಡಿಎಸ್ ಮುಖಂಡರೋರ್ವರು  ಮರಕ್ಕೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಮೃತರನ್ನು ಹಾಸನ ಜಿಲ್ಲೆಯ ಅಕ್ಕನಹಳ್ಳಿ ಗ್ರಾಮದ ಪಿಎಸಿಸಿ ಸೊಸೈಟಿ ಸದಸ್ಯ ಕನ್ನಂಬಾಡಿ ರವಿ(47) ಎಂದು ಗುರುತಿಸಲಾಗಿದ್ದು, ಚನ್ನರಾಯಪಟ್ಟಣದ ಕಬ್ಬಳಿ ದೇವಸ್ಥಾನದ ಬಳಿಯ ಮರದಲ್ಲಿ ಶವ ಪತ್ತೆಯಾಗಿದೆ. ಮರದ ಪಕ್ಕದಲ್ಲೇ ರವಿಯವರ ಬೈಕ್ ಮಗುಚಿಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಇದೊಂದು ಕೊಲೆ ಆಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ನುಗ್ಗೆಹಳ್ಳಿ ಪೊಲೀಸರು ಸ್ಥಳ ಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!

Join the Group

Join WhatsApp Group