ಕಡಬ: ಡಿಸೈನ್ ಡೆಕೊರ್ ಇಂಟೀರಿಯರ್ ಡಿಸೈನ್ ಕಛೇರಿ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ಕಡಬದ ಮಹಾಗಣಪತಿ ಕಾಂಪ್ಲೆಕ್ಸ್ ನಲ್ಲಿ ಡಿಸೈನ್ ಡೆಕೋರ್ ಇಂಟೀರಿಯರ್ಸ್ ಕಛೇರಿಯು ಭಾನುವಾರದಂದು ಶುಭಾರಂಭಗೊಂಡಿತು.

ತಾ.ಪಂ ಮಾಜಿ ಅಧ್ಯಕ್ಷರಾದ ಶೀನಪ್ಪ ಗೌಡ ಬೈತಡ್ಕ ಅವರು ರಿಬ್ಬನ್ ಕಟ್ ಮಾಡುವ ಮೂಲಕ ನೂತನ ಕಛೇರಿಯನ್ನು ಉದ್ಘಾಟಿಸಿದರು. ಬಳ್ಳೇರಿ ಬಿಲ್ಡರ್ಸ್ ನ ಬಾಲಕೃಷ್ಣ ಬಳ್ಳೇರಿಯವರು ದೀಪ ಬೆಳಗಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಕಡಬ ಅನ್ನಪೂರ್ಣ ಹೋಟೆಲ್ ನ ಮಾಲಕರಾದ ಮುತ್ತಕುಮಾರ್, ಬಾಗ್ಯಲಕ್ಷ್ಮೀ ಎಂಟರ್‌ಪ್ರೈಸಸ್ ನ ಮಾಲಕರಾದ ರಾಧಾಕೃಷ್ಣ ಕೊಲ್ಪೆ, ಶ್ರೀಮತಿ ವೇದಾವತಿ ಶೀನಪ್ಪ ಗೌಡ ಬೈತಡ್ಕ, ಕೆ.ಜಿ. ಸತೀಶ್ ಕುಮಾರ್ ಕೊಪ್ಪಡ್ಕ, ಶ್ರೀಮತಿ ಭುವನೇಶ್ವರಿ ಸೀತಾರಾಮ ಕೊಪ್ಪಡ್ಕ, ಕೆ.ಪಿ.ಚಂದ್ರಶೇಖರ್ ಕೊಪ್ಪಡ್ಕ, ಊರ್ಮಿಳಾ ಚಂದ್ರಶೇಖರ್ ಕೊಪ್ಪಡ್ಕ, ಕ್ಷಮಾ ಕೊಪ್ಪಡ್ಕ, ಶ್ರೀಮತಿ ಪವಿತ್ರ‌ ಗುರುಚರಣ್‌ ಕೊಪ್ಪಡ್ಕ, ಪ್ರಖ್ಯಾತ್ ಕೊಪ್ಪಡ್ಕ, ಪದ್ಮನಾಭ ‌ಕಡ್ಲಾರು, ರಂಜಿತ್ ಕಡ್ಲಾರು, ವಿದ್ವಾನ್ ಕಡ್ಲಾರು, ಲೋಕಯ್ಯ ಗೌಡ ಮಾಣಿಬೆಟ್ಟು, ಕು| ಪೂಜಾ, ಕು| ಅಮೂಲ್ಯ, ನವೀನ್ ಕುಂದಲ್ಪಾಡಿ, ಕೆ.ಸಿ ಸುಬ್ರಹ್ಮಣ್ಯ ಕೊಪ್ಪಡ್ಕ, ವಿಜಿತ್ ಕಳಿಗೆ, ಪ್ರಮೋದ್ ಕಳಿಗೆ, ರಂಜನ್ ಪಾರೆಪ್ಪಾಡಿ, ಶ್ರೀಕಾಂತ್ ಪಾರೆಪ್ಪಾಡಿ, ಸಾತ್ವಿಕ್ ಕುದುಂಗು, ಜಯಕುಮಾರ್ ಕೊಪ್ಪಡ್ಕ, ಕಡಬದ A&G ಅಸೋಸಿಯೇಟ್ಸ್ ವಕೀಲರಾದ ಅವಿನಾಶ್ ಬೈತ‌ಡ್ಕ ಮತ್ತು ಗುರುಚರಣ್ ಕೊಪ್ಪಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Also Read  ಕುಂತೂರು: ಚರಂಡಿಗಿಳಿದು ಹಿಂತಿರುಗಿ ನಿಂತ ಕಾರು ► ಕಾರಿನಲ್ಲಿದ್ದ ದಂಪತಿ ಪಾರು

ನೂತನ ಸಂಸ್ಥೆಯಲ್ಲಿ ಮನೆ, ಫ್ಲಾಟ್, ಅಪಾರ್ಟ್‌ಮೆಂಟ್ ಹೋಟೆಲ್, ಕಛೇರಿ, ಅಂಗಡಿ, ಶೋರೂಂ, ಬ್ಯೂಟಿಪಾರ್ಲ‌್ರಗಳು, ಸಲೂನ್‌ಗಳು, ರೆಸ್ಟೋರೆಂಟ್‌ಗಳು ಇತ್ಯಾದಿಗಳ ಆಂತರಿಕ ಕೆಲಸ, ಪೀಠೋಪಕರಣಗಳು, ಎಲ್ಲಾ ರೀತಿಯ ಸೀಲಿಂಗ್ ಕೆಲಸಗಳು, ಪೇಂಟಿಂಗ್ ಮತ್ತು ವಾಲ್‌ಪೇಪ‌ರ್, ಅಲ್ಯೂಮಿನಿಯಂ ಮತ್ತು ಸ್ಟೀಲ್, ವುಡ್ ವೀನರ್ ಪಾಲಿಶಿಂಗ್, ಇಟಾಲಿಯನ್ ಮತ್ತು ಮಾಡ್ಯುಲರ್ ಕಿಚನ್, ಒಳಾಂಗಣ ವಿನ್ಯಾಸಗಳನ್ನು ಕ್ಲಪ್ತ ಸಮಯದಲ್ಲಿ ಮಿತ ದರದಲ್ಲಿ ಮಾಡಿಕೊಡಲಾಗುವುದು ಎಂದು ಮಾಲಕರಾದ ಹವ್ಯಾಸ್ ಕೊಪ್ಪಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಡಿಮೆಯಾಗದ ಸೊಂಟ ನೋವು ➤ ಮನನೊಂದ ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

 

 

 

error: Content is protected !!
Scroll to Top