ಸೇತುವೆಯ ಮಧ್ಯದಲ್ಲಿ ಭೀಕರ ಕಾರು ಅಪಘಾತ ➤ ಸಿನಿಮೀಯ ಶೈಲಿಯಲ್ಲಿ ತಡೆಗೋಡೆಗೆ ಸಿಲುಕಿದ ಕಾರು

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಸೆ.12. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಸಿನಿಮೀಯ ರೀತಿಯಲ್ಲಿ ನೇತಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಲ್ಲಿ ನಡೆದಿದೆ.

ಜಮಖಂಡಿಯ ಚಿಕ್ಕಪಡಸಲಗಿ ಸೇತುವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಿಯಾ ಸೆಲ್ಟಸ್ ಕಾರು ತಡೆಗೋಡೆಗೆ ಢಿಕ್ಕಿ ಹೊಡೆದು ತಡೆಗೋಡೆಯ ಮೇಲೆ ನಿಂತಿದೆ. ಕಾರಿನಲ್ಲಿದ್ದವರ ಅದೃಷ್ಟ ಚೆನ್ನಾಗಿದ್ದರಿಂದ ಕೂದಲೆಳೆಯ ಅಂತರದಲ್ಲಿ ಕೃಷ್ಣಾ ನದಿಗೆ ಬೀಳುವುದರಿಂದ ಪಾರಾಗಿದ್ದಾರೆ. ಅಪಘಾತದ ದೃಶ್ಯ ಮಾತ್ರ ಜುಂ ಎನ್ನಿಸುವಂತಿದೆ.

 

 

 

 

error: Content is protected !!

Join the Group

Join WhatsApp Group