ಬೆಳ್ಳಂಬೆಳಗ್ಗೆ ಬೆಂಕಿಗಾಹುತಿಯಾದ ಪಾರ್ಸೆಲ್ ಸಾಗಾಟದ ವಾಹನ ➤ ಮಧ್ಯ ರಸ್ತೆಯಲ್ಲೇ ಸುಟ್ಟು ಭಸ್ಮ

(ನ್ಯೂಸ್ ಕಡಬ) newskadaba.com ಸಕಲೇಶಪುರ, ಆ.19. ಪಾರ್ಸೆಲ್ ಸಾಗಾಟದ ಕ್ಯಾಂಟರ್ ವಾಹನವೊಂದು ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಗಾಹುತಿಯಾದ ಘಟನೆ ಬೆಂಗಳೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರದ ದೋಣಿಗಲ್ ಸಮೀಪ ಗುರುವಾರ ಬೆಳಿಗ್ಗೆ ಸಂಭವಿಸಿದೆ.

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕ್ಯಾಂಟರ್, ದೋಣಿಗಲ್ ಸಮೀಪ ಹೆದ್ದಾರಿಯಲ್ಲೇ ಹೊತ್ತಿ ಉರಿದಿದೆ. ಸ್ಥಳೀಯರು ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ ಅದಾಗಲೇ ಬೆಂಕಿಯ ಕೆನ್ನಾಲಗೆಗೆ ಕ್ಯಾಂಟರ್ ಲಾರಿ ಭಸ್ಮವಾಗಿದೆ. ಚಾಲಕ ತಕ್ಷಣವೇ ಹೊರ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Also Read  ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಕಾರು ► ಪತ್ರಕರ್ತ ಸೇರಿದಂತೆ ಇಬ್ಬರು ಮೃತ್ಯು

 

 

 

 

 

error: Content is protected !!
Scroll to Top