ರಾಜ್ಯಾದ್ಯಂತ ನಾಳೆಯಿಂದ ಲಾಕ್‍ಡೌನ್ ಸಡಿಲ..? ➤ ರಸ್ತೆಗಿಳಿಯಲಿವೆ ಕೆಎಸ್ಸಾರ್ಟಿಸಿ ಬಸ್‌ಗಳು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.07. ರಾಜ್ಯದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಹೇರಲಾಗಿರುವ ಲಾಕ್‍ಡೌನ್ ನಾಳೆಯಿಂದ ಹಂತಹಂತವಾಗಿ ಅನ್ ಲಾಕ್ ಆಗಲಿದೆ.

ನಾಳೆಯಿಂದ ಒಂದೊಂದೇ ಸರಕಾರಿ ಸೇವೆಗಳು ಆರಂಭಗೊಳ್ಳುತ್ತಿದ್ದು, ನಾಳೆಯಿಂದ ಆಯ್ದ ಕೆಎಸ್ಸಾರ್ಟಿಸಿ ಬಸ್ ಗಳು ರಸ್ತೆಗಿಳಿಯಲಿವೆ. ರಾಜ್ಯದಲ್ಲಿರುವ ಎಲ್ಲಾ ರಿಜಿಸ್ಟ್ರಾರ್​ ಮತ್ತು ಸಬ್​ ರಿಜಿಸ್ಟ್ರಾರ್ ಕಚೇರಿಗಳು ನಾಳೆಯಿಂದಲೇ ತೆರೆಯಲಿವೆ. ಮೊದಲನೇಯ ಹಂತದಲ್ಲಿ ಶೇ.50ರಷ್ಟು ಆಟೋ, ಟ್ಯಾಕ್ಸಿಗಳು ರಸ್ತೆಗಿಳಿಯಲಿವೆ. ಎಲ್ಲಾ ಧಾರ್ಮಿಕ ಸ್ಥಳಗಳು ತೆರೆಯಲಿದ್ದು, ಮಂದಿರ, ಮಸೀದಿ, ಚರ್ಚ್ ತೆರೆಯುವುದಕ್ಕೆ ಕೇಂದ್ರವು ಅನುಮತಿ ನೀಡಿದೆ.

 

 

 

error: Content is protected !!

Join the Group

Join WhatsApp Group