ಕುಕ್ಕೇ ಸುಬ್ರಹ್ಮಣ್ಯ ದೇವಾಲಯದ ಮಾಸ್ಟರ್ ಪ್ಲಾನ್ ಸಮಿತಿಗೆ ಸದಸ್ಯರ ನೇಮಕ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಮಾ. 09. ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಮಾಸ್ಟರ್‌ ಪ್ಲಾನ್‌ ಕಮಿಟಿಯು ಪುನರ್‌ ರಚನೆಯಾಗಿದ್ದು, ನಾಲ್ವರು ನೂತನ ಸದಸ್ಯರನ್ನು ನೇಮಕ ಮಾಡಲಾಗಿದೆ.

ಈ ಹಿಂದೆ ಮಾಸ್ಟರ್‌ ಪ್ಲಾನ್‌ ಸಮಿತಿಯಲ್ಲಿದ್ದ ನಾಲ್ವರ ನೇಮಕಾತಿ ರದ್ದುಗೊಳಿಸಿ, ನೂತನ ಸದಸ್ಯರಾಗಿ ಕಿಶೋರ್‌ ಕೂಜುಗೋಡು, ಡಾ.ಚಂದ್ರಶೇಖರ. ಎ, ಮನೋಜ್‌ ಎಸ್‌, ಚಂದ್ರಶೇಖರ ಟಿ ಇವರನ್ನು ತಕ್ಷಣವೇ ನೇಮಕ ಮಾಡುವಂತೆ ಧಾರ್ಮಿಕ ದತ್ತಿ ಇಲಾಖಾ ಆಯುಕ್ತರು ಆದೇಶ ನೀಡಿದ್ದರು.

error: Content is protected !!

Join the Group

Join WhatsApp Group