ಕಡಬ: ಶ್ರೀಕಂಠಸ್ವಾಮಿ ಶ್ರೀಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಮುತ್ತುಕುಮಾರ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 23. ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಜಿಲ್ಲಾ ಧಾರ್ಮಿಕ ಪರಿಷತ್ ಸೂಚನೆಯಂತೆ 9 ಮಂದಿ ಸದಸ್ಯರನ್ನು ನೇಮಿಸಲಾಗಿದೆ.

ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಹೊಟೇಲ್ ಉದ್ಯಮಿ ಮುತ್ತು ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಗಂಗಾಧರ ಕಡಬ ಅವರು ಆಯ್ಕೆಯಾಗಿದ್ದಾರೆ. ಸಮಿತಿಗೆ ದೇವಸ್ಥಾನದ ಪ್ರಧಾನ ಅರ್ಚಕ ಕೇಶವ ಬೈಪಾಡಿತ್ತಾಯ, ಮುತ್ತು ಕುಮಾರ್, ಶ್ರೀಮತಿ ಕೆ.ಜಿ. ಶಾಂತಿ ಭಟ್, ವಿಜಯ ಕುಮಾರಿ.ಪಿ, ರಾಮಚಂದ್ರ.ಕೆ, ಪ್ರಸಾದ್ ಗೌಡ.ಕೆ, ಮೋನಪ್ಪ
ಗೌಡ ನಾಡೋಳಿ, ಪುರುಷೋತ್ತಮ ಕೆ.ಎಸ್. ಗಂಗಾಧರ ಕಡಬ ಅವರನ್ನು ನೇಮಕಗೊಳಿಸಲಾಗಿದೆ.

error: Content is protected !!

Join the Group

Join WhatsApp Group