ಬಾಜಿನಡ್ಕ-ಕರಿಂಬಿ-ಬನ ಕಾಂಕ್ರೀಟ್ ರಸ್ತೆಗೆ ಗುದ್ದಲಿ ಪೂಜೆ

(ನ್ಯೂಸ್ ಕಡಬ) newskadaba.com ಅರಂತೋಡು, ಫೆ. 22. ಜಿಲ್ಲಾ ಪಂಜಾಯತ್ ಅನುದಾನದಲ್ಲಿ ಬಾಜಿನಡ್ಕ – ಕರಿಂಬಿ ಬನ ರಸ್ತೆಗೆ ಗುದ್ದಲಿ ಪೂಜೆಯನ್ನು ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ ಅವರು ನೆರವೆರಿಸಿದರು.

ಈ ಸಂದರ್ಭದಲ್ಲಿ ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಹರಿಣಿ ದೇರಾಜೆ, ಗ್ರಾಮ ಪಂಚಾಯತ್ ಸದಸ್ಯ ಗಂಗಾಧರ ಬನ, ಪ್ರಮುಖರಾದ ದಯಾನಂದ ಬನ, ಗಂಗಾಧರ ಕರಿಂಬಿ, ತೇಜನಾಥ ಬನ, ಶೇಷಪ್ಪ ಬನ, ವಾಸುದೇವ ಬಾಜಿನಡ್ಕ, ಅಶ್ವತ್ ಬಾಜಿನಡ್ಕ, ಯಶವಂತ ಬಾಜಿನಡ್ಕ, ದಿನೇಶ ಕರಿಂಬಿ, ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು. ಅನುದಾನ ತರಿಸಲು ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಗ್ರಾಮ ಪಂಚಾಯತ್ ಸದಸ್ಯ ಗಂಗಾಧರ ಬನ ಶ್ರಮಿಸಿದ್ದರು.

Also Read  ಕನ್ನಡ ನಾಮಫಲಕ ಅಳವಡಿಕೆಗೆ ಮತ್ತೆ 2 ವಾರಗಳ‌ ಅವಧಿ ವಿಸ್ತರಣೆ- ಡಿಸಿಎಂ ಡಿಕೆಶಿವಕುಮಾರ್

error: Content is protected !!
Scroll to Top