?? ➤➤ Big Breaking News ಮರ್ಧಾಳ: ಟಿಪ್ಪರ್ ಹಾಗೂ ಮಹೀಂದ್ರಾ ಜೀತೋ ನಡುವೆ ಭೀಕರ ಅಪಘಾತ ➤ ಅರ್ಧತಾಸು ವಾಹನದೊಳಗೆ ಸಿಲುಕಿದ್ದ ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಮರ್ಧಾಳ, ಫೆ. 12. ಟಿಪ್ಪರ್ ಹಾಗೂ ಕೋಳಿ ಸಾಗಾಟದ ವಾಹನದ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾ.ಹೆದ್ದಾರಿಯ ಮರ್ಧಾಳದಲ್ಲಿ ಶುಕ್ರವಾರದಂದು ನಡೆದಿದೆ.

ಕೋಳಿ ಸಾಗಾಟದ ವಾಹನದ ಚಾಲಕ ಗಂಭೀರ ಗಾಯಗೊಂಡಿದ್ದು, ಕಡಬ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘತಾದ ತೀವ್ರತೆಗೆ ಕೋಳಿ ಸಾಗಾಟದ ವಾಹನವು ಜಖಂ ಗೊಂಡಿದ್ದು, ಅರ್ಧತಾಸಿಗಿಂತಲೂ ಹೆಚ್ಚು ಸಮಯ ವಾಹನದೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಊರವರು ಹರಸಾಹಸಪಟ್ಟರು. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Also Read  ಉಪ್ಪಿನಂಗಡಿ: ಹಾಡಹಗಲೇ ಮನೆ ವರಾಂಡದಲ್ಲಿದ್ದ ನಾಯಿಮರಿಯನ್ನು ಹೊತ್ತೊಯ್ದ ಚಿರತೆ ➤ ಆತಂಕದಲ್ಲಿ ಗ್ರಾಮಸ್ಥರು

error: Content is protected !!
Scroll to Top