? ಬಂಟ್ವಾಳ: ಮನೆಯಲ್ಲಿ ಬೈದರು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ 9ನೇ ತರಗತಿ ಬಾಲಕ..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ. 09. 9ನೇ ತರಗತಿಯ ವಿದ್ಯಾರ್ಥಿಯೋರ್ವ ಹೆತ್ತವರು ಬೈದರು ಎಂಬ ಸಣ್ಣ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಾಳ್ತಿಲ ಗ್ರಾಮದ ಚೆರ್ಕಳ ಎಂಬಲ್ಲಿ ನಡೆದಿದೆ.


ಆತ್ಮಹತ್ಯೆಗೈದ ಬಾಲಕನನ್ನು ಹರ್ಷಿತ್ (14) ಎಂದು ಗುರುತಿಸಲಾಗಿದೆ. ಈತ ಜಾತ್ರೆಯಿಂದ ಬರುವಾಗ ತಡವಾಗಿದ್ದಲ್ಲದೆ, ತಂಗಿಗೆ ಐಸ್ ಕ್ರೀಂ ಕೂಡಾ ತಂದಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಹೆತ್ತವರು ಜೋರು ಮಾಡಿದ್ದರು. ಇದೇ ಕಾರಣವನ್ನು ನೆಪ ಮಾಡಿಕೊಂಡು ಮಾನಸಿಕವಾಗಿ ನೊಂದು ಮನೆಯ ಕೋಣೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

error: Content is protected !!

Join the Group

Join WhatsApp Group