ಗುತ್ತಿಗಾರು- ಸುಬ್ರಹ್ಮಣ್ಯ ಅವೈಜ್ಞಾನಿಕ ವಿದ್ಯುತ್ ಕೇಬಲ್ ಅಳವಡಿಕೆ ➤ ಕಾಂಗ್ರೆಸ್ ಆರೋಪ

(ನ್ಯೂಸ್ ಕಡಬ) newskadaba.com ಸುಳ್ಯ, ಫೆ. 06. ಗುತ್ತಿಗಾರಿನಿಂದ ಸುಬ್ರಹ್ಮಣ್ಯದವರಿಗೆ 110ಕೆ.ವಿ ವಿದ್ಯುತ್ ಭೂಗತ ಕೇಬಲ್ ಅಳವಡಿಕೆ ಅವೈಜ್ಙಾನಿಕ ರೀತಿಯಲ್ಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪರಶುರಾಮ ಚಿಲ್ತಡ್ಕ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಳೆದ ಆರು ತಿಂಗಳಿನಿಂದ ರಸ್ತೆ ಬದಿ ಭೂಮಿಯನ್ನು ಅಗೆದು ಅರ್ಧದಲ್ಲಿ ಬಿಟ್ಟಿದ್ದು, ಸಾರ್ವಜನಿಕ ನಡೆದಾಡಲು ಸಾಧ್ಯವಾಗುವುದಿಲ್ಲ, ಸರಿಯಾದ ರೀತಿಯಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಜಯಪ್ರಕಾಶ್ ರೈ, ತಾಲೂಕು ಸಂಘಟನ ಕಾರ್ಯದರ್ಶಿ ದಿನೇಶ್ ಸರಸ್ವತಿ ಮಹಲ್ ಹಾಗೂ ಕಾಂಗ್ರೆಸ್ ಯುವನಾಯಕ ಸನತ್ ಮುಳುಗಾಡು ಮೊದಲಾದವರು ಉಪಸ್ಥಿತರಿದ್ದರು.

Also Read  ಅಪಘಾತದಿಂದ ಮೆದುಳು ನಿಷ್ಕ್ರಿಯ..!   ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ 12ರ ಬಾಲಕಿ

error: Content is protected !!
Scroll to Top