?ಕೊಣಾಜೆ: ಖಾರದ ಪುಡಿ ಎರಚಿ ಮಹಿಳೆಯ ಕರಿಮಣಿ ಸರ ಎಗರಿಸಿದ ಕಳ್ಳರು

(ನ್ಯೂಸ್ ಕಡಬ) newskadaba.com ಕೊಣಾಜೆ, ಫೆ. 06. ದುಷ್ಕರ್ಮಿಗಳ ತಂಡವೊಂದು ಮಹಿಳೆಗೆ ಖಾರದ ಪುಡಿ ಎರಚಿ ಕತ್ತಿನಲ್ಲಿದ್ದ ಕರಿಮಣಿಸರವನ್ನು ಎಗರಿಸಿ ಪರಾರಿಯಾದ ಘಟನೆ ಶುಕ್ರವಾರ ಹರೇಕಳದ ಬಾವಲಿಗುರಿ ಎಂಬಲ್ಲಿ ನಡೆದಿದೆ.


ಹರೇಕಳದ ಬಾವಲಿಗುರಿ ಎಂಬಲ್ಲಿ ಬಸ್ಸಿಗಾಗಿ ಕಾಯುತ್ತ ನಿಂತಿದ್ದ ಶಾಂತ ಎಂಬ ಮಹಿಳೆಗೆ ಬೈಕಿನಲ್ಲಿ ಬಂದ ಇಬ್ಬರು ಖಾರದ ಪುಡಿ ಎರಚಿ ಅವರ ಕತ್ತಿನಲ್ಲಿದ್ದ ಕರಿಮಣಿ ಸರವನ್ನು ಎಗರಿಸಿ ಪರಾರಿಯಾಗಿದ್ದರು. ಆದರೆ ದುಷ್ಕರ್ಮಿಗಳು ಎಗರಿಸಿದ ಕರಿಮಣಿ ಸರ ರೋಲ್ಡ್ ಗೋಲ್ಡ್ ಆಗಿತ್ತು ಎನ್ನಲಾಗಿದೆ. ಈ ಕುರಿತು ಶಾಂತ ಎಂಬವರು ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

error: Content is protected !!
Scroll to Top