ಎಂ.ಜೆ.ಎಸ್.ಎಸ್.ಎ. ಮಂಗಳೂರು ಧರ್ಮಪ್ರಾಂತ್ಯದ ಮುಖ್ಯ ನಿರ್ದೇಶಕರಾಗಿ ಫಾ| ಪಿ.ಕೆ. ಅಬ್ರಹಾಂ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.08. ಮಲಂಕರ ಜಾಕೋಬೈಟ್ ಸಿರಿಯನ್ ಸಂಡೇ ಸ್ಕೂಲ್ ಅಸೋಶಿಯೇಶನ್ ಮಂಗಳೂರು ಧರ್ಮಪ್ರಾಂತ್ಯದ ಮುಖ್ಯ ನಿರ್ದೇಶಕರಾಗಿ ರೆ|ಫಾ| ಪಿ.ಕೆ ಅಬ್ರಹಾಂ ಆಯ್ಕೆಯಾಗಿದ್ದು ಕಾರ್ಯದರ್ಶಿಯಾಗಿ ಸುಜನ್ ಇ.ಎಸ್. ಆಯ್ಕೆಗೊಂಡಿರುತ್ತಾರೆ.

ಮಂಗಳೂರು ಜೆಪ್ಪು ಸೈಂಟ್ ಅಂತೋನಿಯವರ ದೇವಾಲಯದಲ್ಲಿ ಮಂಗಳವಾರದಂದು ನಡೆದ ಮಂಗಳೂರು ಧರ್ಮಪ್ರಾಂತ್ಯದ ಬೈಂದೂರು, ಎನ್ಆರ್ ಪುರ, ದಕ್ಷಿಣ ಕನ್ನಡ, ವ್ಯಾಪ್ತಿಯ ಚರ್ಚುಗಳ ಧರ್ಮಗುರುಗಳ ಸಮಾರಂಭದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ರೆ|ಫಾ| ಪಿ.ಕೆ ಅಬ್ರಹಾಂ ರವರು ಕುಂತೂರು ಸೈಂಟ್ ಮೇರಿಸ್ ಸಿರಿಯನ್ ಚರ್ಚಿನ ಧರ್ಮಗುರುಗಳಾಗಿರುತ್ತಾರೆ.

error: Content is protected !!
Scroll to Top