ಮಂಗಳೂರು: ಅಡ್ಯಾರ್ ಕಟ್ಟೆ ಬಳಿ ತೇಲಿ ಬಂದ ಜೋಡಿ ಮೃತದೇಹ..! ➤ ಅಷ್ಟಕ್ಕೂ ಆತ್ಮಹತ್ಯೆಗೆ ಕಾರಣವೇನು..?

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 30. ಸಾಮಾಜಿಕ ಜಾಲತಾಣಗಳಲ್ಲಿ ಕಳೆದೆರಡು ದಿನಗಳಿಂದ ಯುವಕ ಹಾಗೂ ಯುವತಿಯ ಶವ ನೀರಿನಲ್ಲಿ ತೇಲುತ್ತಿರುವಂತಹ ವೀಡಿಯೊವೊಂದು ವೈರಲ್ ಆಗುತ್ತಿದ್ದು, ಅನೇಕರು ಇದೊಂದು ಜೋಡಿ ಆತ್ಮಹತ್ಯೆ ಆಗಿರಬಹುದು ಅಂದುಕೊಂಡಿದ್ದರು. ಆದರೆ ಇದೀಗ ಈ ವೀಡಿಯೋ ಅಸಲಿಯತ್ತು ಗೊತ್ತಾಗಿದೆ.


ಇದು ಆತ್ಮಹತ್ಯೆ ಮಾಡಿಕೊಂಡ ಶವವಲ್ಲ, ಇದು ಜೀವಂತ ಶವ. ಇದೊಂದು ಫೋಟೋಶೂಟ್ ಎಂದು ತಿಳಿದು ಬಂದಿದೆ. ಸದ್ಯ ವಿಡಿಯೋ ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ಇದು ಮಂಗಳೂರಿನ ಅಡ್ಯಾರಿನಲ್ಲಿ ನಡೆದ ಫೋಟೋಶೂಟ್ ಅಂತ ಹೇಳಲಾಗುತ್ತಿದೆ.

Also Read  ಜಾತಕದಲ್ಲಿ ದೋಷಗಳು ನಿವಾರಣೆಯಾಗಬೇಕು ಎಂದರೆ ಈ ಒಂದು ವಿಧಾನ ತಿಳಿದುಕೊಳ್ಳಿ

error: Content is protected !!
Scroll to Top