ಬೆಳಂದೂರು: ನೂತನ ವಿದ್ಯುತ್ ಪರಿವರ್ತಕ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಾಣಿಯೂರು, ಜ. 20. ಮಿಪಾಲು, ಅಬೀರ ಹಾಗೂ ಪಾತಾಜೆ ನಿವಾಸಿಗಳ ಹಲವು ವರ್ಷಗಳಿಂದ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದು, ಇದರ ನಿವಾರಣೆಗೆಂದು ರಚನೆಗೊಂಡ ಎರಡನೇ ವಿದ್ಯುತ್ ಪರಿವರ್ತಕಕ್ಕೆ ಕೊಡಿಮಾರು ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಉದಯ ರೈ ಮಿಪಾಲಿನಲ್ಲಿ ಚಾಲನೆ ನೀಡಿದರು.

ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಜಯಂತ ಅಬೀರ, ಶಿವಪ್ರಸಾದ್ ಆಳ್ವ, ಪ್ರಸನ್ನ ರೈ, ಗುತ್ತುಮನೆ ಸೀತಾರಾಮ ರೈ ಪವರ್ ಮ್ಯಾನ್ ಸಂತೋಷ್ ಹಾಗೂ ಶಿವಾನಂದ ಮೊದಲಾದವರು ಉಪಸ್ಥಿತರಿದ್ದರು.

Also Read  ನೀರಿನ ಟ್ಯಾಪ್ ಓಪನ್ ಮಾಡಿ ದರೋಡೆ ಕಳ್ಳರ ಹೊಸ ತಂತ್ರ ➤ ಜಾಗರೂಕತೆಯಿಂದ ಇರುವಂತೆ ಬೆಳ್ಳಾರೆ ಎಸ್ಐ ಆಂಜನೇಯ ರೆಡ್ಡಿ ಎಚ್ಚರಿಕೆ

error: Content is protected !!
Scroll to Top