ನಂಬಿ ಬರುತ್ತಿರುವ ದಲಿತರಿಗೆ ದ್ರೋಹ ಬಗೆಯುತ್ತಿರುವ ಕಾಂಗ್ರೆಸ್ – ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ

(ನ್ಯೂಸ್ ಕಡಬ) newskadaba.com ಕಡಬ, ಅ.16. ಜ್ಯಾತತೀತ ನಿಲುವಿನೊಂದಿಗೆ ದಲಿತರನ್ನು ಉದ್ಧಾರ ಮಾಡುತ್ತಾ ಬಂದಿರುವ ಕಾಂಗ್ರೆಸ್ ಈಗಿನ ಜಿಲ್ಲಾ ಉಸ್ತುವಾರಿ ಸಚಿವರಂತಹ ದಲಿತ ವಿರೋಧಿ ನಾಯಕರಿಂದ ದೀನ ದಲಿತರ ಕಡೆಗಣನೆ ನಡೆಯುತ್ತಿದ್ದು ಡಿ.ಸಿ.ಮನ್ನಾ ಭೂಮಿಯಲ್ಲಿ ಕೂಡ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಬಗ್ಗೆ ದಲಿತರು ಎಚ್ಚರವಾಗಬೇಕಾಗಿದೆ ಎಂದು ದಲಿತ್ ಸೇವಾ ಸಮಿತಿ ತಾಲೂಕು ಅಧ್ಯಕ್ಷ ರಾಜು ಹೊಸ್ಮಠ ಹೇಳಿದರು.

ಅವರು ಅಲಂಕಾರು ರೈತ ಭವನದಲ್ಲಿ ಅ.15 ರಂದು ನಡೆದ ದಲಿತ್ ಸೇವಾ ಸಮಿತಿ ಮಾಸಿಕ ಸಭೆಯಲ್ಲಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಭಾವಚಿತ್ರದ ಎದುರು ದೀಪ ಬೆಳಗಿಸಿ ಮಾತನಾಡಿದರು. ಈಗಾಗಲೇ ಅಲಂಕಾರು ಗ್ರಾಮದಲ್ಲಿ 62 ಎಕ್ರೆ ಡಿ.ಸಿ. ಮನ್ನಾ ಭೂಮಿ ಇದ್ದು ಇದನ್ನು ಭೂ ರಹಿತ ದಲಿತ ಕುಟುಂಬಗಳಿಗೆ ಹಂಚುವುದಲ್ಲದೆ ಡಿ.ಸಿ. ಮನ್ನಾ ಭೂಮಿ ಯಾರ್ಯಾಲ್ಲಿ ಆತಿಕ್ರಮಿಸಪಟ್ಟಿದೆಯು ಸರ್ವೆ ಇಲಾಖೆಯಿಂದ ಕೂಡಲೇ ಅಳತೆ ಮಾಡಿಸಿ ದಲಿತರಿಗೆ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕಾಗಿದೆ ಎಂದ ಅವರು ಸ್ವಾತಂತ್ರ್ಯ ನಂತರ ಡಾ. ಬಾಬಾಸಾಹೇಬ್ ಅಂಬೇಡ್ಕರ್ರವರ ಸಂವಿಧಾನ ಬದ್ಧ ಕಾನೂನಿನ ಅಡಿಯಲ್ಲಿ ದಲಿತರಿಗೆ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಒದಗಿಸುತ್ತ ಬಂದಿರುವ ಕಾಂಗ್ರೆಸ್ ಪಕ್ಷದ ಈಗಿನ ಈ ಜಿಲ್ಲೆಯ ದಲಿತ ವಿರೋಧಿ ನಾಯಕರಿಂದ ಬಡ ವರ್ಗದ ದೀನ ದಲಿತರಾದ ನಾವು ಸೌಲಭ್ಯಗಳಿಂದ ವಂಚಿತರಾಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಕೆಲವು ದಿನಗಳ ಹಿಂದೆ ಬಿ,ಸಿ.ರೋಡ್ ಮಿನಿ ವಿಧಾನ ಸೌಧದ ಎದುರು ನಡೆದ  ಉಪವಾಸ ಸತ್ಯಾಗ್ರಹದಲ್ಲಿ ವಿವಿಧ ಪಕ್ಷಗಳ ರಾಜಕೀಯ ನಾಯಕರು ನಮ್ಮ ಕಷ್ಟವನ್ನು ಪರಿಗಣಿಸಿ ಸಮಾಧಾನದ ಮಾತುಗಳನ್ನಾಡಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸುವುದಾಗಿ ಹೇಳಿದ್ದರೂ ಒಬ್ಬ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕನಾಗಿ ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ರಮಾನಾಥ ರೈಯವರು ಸತ್ಯಾಗ್ರಹದ ಬಳಿಯಿಂದಲೇ ತೆರಳಿದರೂ ಸೌಜನ್ಯಕ್ಕಾದರೂ ನಮ್ಮನ್ನು ಮಾತನಾಡಿಸದೇ ಇರುವುದು ದಲಿತರ ಬಗ್ಗೆ ಅವರಿಗೆ ಎಷ್ಟು ಕಾಳಜಿ ಇದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬೇಕಾಗಿದೆ. ಅಲ್ಲದೆ ತಾಲೂಕು ಡಿ.ಸಿ. ಮನ್ನಾ ಭೂಮಿ ಗುರುತಿಸುವಿಕೆಯ ಟಾಸ್ಕ್‌ಪೋರ್ಸ್  ಸಮಿತಿಯಲ್ಲಿ ಡಿ.ಸಿ.ಮನ್ನಾ ಭೂಮಿಯ ಬಗ್ಗೆ ಸಂಪುರ್ಣ ಮಾಹಿತಿ ಇರುವ ದಲಿತ ಪರ ಸಂಘಟನೆಗಳ ಮುಖಂಡರನ್ನು ಬಿಟ್ಟು ಒಟ್ಟಿನಲ್ಲಿ ದಲಿತರ ಸಮಿತಿಯಾಗಬೇಕೆಂದು ತಮ್ಮಿಷ್ಟದಂತೆ ಕೆಲವರನ್ನು ಸಮಿತಿಯಲ್ಲಿ ಸೇರಿಸಿ ಅನ್ಯಾಯ ಎಸಗಿರುವುದಲ್ಲದೆ ಮೇಲ್ವಾರ್ಗದವರು ಆಕ್ರಮಿಸಿಕೊಂಡಿರುವ ಡಿ.ಸಿ.ಮನ್ನಾ ಭೂಮಿ ದಲಿತರ ಪಾಲಗಾಬಹುದೆಂದು ಈ ರೀತಿಯ ಕುಟಿಲ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ನಾಯಕರು ದಲಿತರ ಬಗ್ಗೆ ಕಾಳಜಿ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡಬೇಕಾದೀತು ಎಂದು ಎಚ್ಚರಿಸಿದ ಅವರು ಮುಂದಿನ ಚುನಾವಣೆಯಲ್ಲಿ ಜಿಲ್ಲಾ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಸೇಶಪ್ಪ ಬೆದ್ರಕಾಡುರವರ ತಿರ್ಮಾನಕ್ಕೆ ಬದ್ಧರಾಗಬೇಕು ಎಂದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಕು.ನಂದಿನಿ ಮನವಳಿಕೆ ಅವರಿಗೆ ಒಂದು ನಿಮಿಷದ ಮೌನಪ್ರಾರ್ಥನೆ ಸಲ್ಲಿಸಲಾಯಿತು.

 

 ಸಭೆಯ ಅಧ್ಯಕ್ಷತೆಯನ್ನು ಅಲಂಕಾರು ಗ್ರಾಮ ಶಾಖೆಯ ಅಧ್ಯಕ್ಷ ಮೋಹನ ಶರವೂರು ವಹಿಸಿದ್ದರು. ಅಲಂಕಾರು ಗ್ರಾಮ ಶಾಖೆಯ  ಗೌರವಾಧ್ಯಕ್ಷ ಬಾಬು ಮರುವಂತಿಲ, ಮುಗೇರ ಯುವ ವೇದಿಕೆ ಅಧ್ಯಕ್ಷ ಕೃಷ್ಣ  ಗಾಣಂತಿ, ಮಾಜಿ ತಾಲೂಕು ಗೌರವಾಧ್ಯಕ್ಷ ಶೀನ ಮೂಲೆತ್ತಮಜಲು, ಕು. ಹರ್ಷಿತ ನಾಯ್ಕ ಅಲಂಕಾರು ಕಡಬ ಹೋಬಳಿ ಕಾರ್ಯದರ್ಶಿ ಸುರೇಶ್ ತೋಟಂತ್ತಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಲಂಕಾರು ಶಾಖಾ ಕಾರ್ಯದರ್ಶಿ ಕು. ಹರ್ಷಿತ ನಗ್ರಿ ವರದಿ ವಾಚಿಸಿದರು. ಕೇಶವ ಕುಪ್ಲಾಜೆ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಶೇಖರ ಮರುವಂತಿಲ, ರವಿ ಆಲಂಕಾರು, ಜರ್ನಾಧನ ನಾಯ್ಕ, ಗೋಜ ಪಾಂಜೋಡಿ, ನಾತಾಯಣ ಪುರುಷಬೆಟ್ಟು, ಗುಲಾಬಿ ನಗ್ರಿ, ವಿಶಾಲಾಕ್ಷಿ ನಗ್ರಿ, ಮೋನಪ್ಪ ಕೊನೆಮಜಲು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group