ಭಾರತವು ಕೊಲೆಗಡುಕರ ರಾಷ್ಟ್ರವಾಗಿ ಪ್ರಸಿದ್ಧಿಯಾಗುತ್ತಿದೆ ► ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.15. ಭಾರತವು ಸುಳ್ಳಿನ ಸಾಮ್ರಾಜ್ಞವಾಗಿದ್ದು, ಕೊಲೆಗಡುಕರ ರಾಷ್ಟ್ರವಾಗಿ ಪ್ರಸಿದ್ಧಿಯಾಗುತ್ತಿದೆ. ದನ ಕಡಿದವರನ್ನು ಬಂಧಿಸುತ್ತಾರೆ ಆದರೆ ಜನರನ್ನು ಕೊಂದವರನ್ನು ಬಂಧಿಸುವುದಿಲ್ಲ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಹೇಳಿದರು.

 

ಅವರು ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ನಡೆದ ‘ನಮಗೂ ಹೇಳಲಿಕ್ಕಿದೆ’ ಸಮಾವೇಶದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಭಾರತವು ದನಗಳ ಭಾರತವಾಗಬಾರದು. ಜನಗಳ ಭಾರತವಾಗಬೇಕು. ಕನ್ನಡದ ಹುಲಿ, ಕ್ರಾಂತಿ ವೀರ ಟಿಪ್ಪು ಸುಲ್ತಾನ್‌ ಸ್ವಾತಂತ್ರ್ಯ ಹೋರಾಟಕ್ಕಾಗಿ ಮಕ್ಕಳನ್ನು ಅಡವಿಟ್ಟಿದ್ದ. ಆತನ ಪ್ರತಿಮೆ ಕೆಂಪುಕೋಟೆಯ ಮೇಲಿರಬೇಕಿತ್ತು. ಸ್ವಾತಂತ್ರ್ಯಕ್ಕಾಗಿ ಗಾಂಧಿ, ಸುಭಾಷ್‌ಚಂದ್ರ ಬೋಸ್‌, ಭಗತ್‌ಸಿಂಗ್‌ ಏನೂ ಮಾಡಿಲ್ಲವೆಂದರು. ‘ಮೋದಿ ಅವರೇ ಪಿಎಫ್ಐ ಭಯೋತ್ಪಾದಕ ಸಂಘಟನೆಯಲ್ಲ, ದೇಶವನ್ನು ಒಡೆಯುತ್ತಿರುವ ನೀವು ನಿಜವಾದ ಭಯೋತ್ಪಾದಕರು ಎಂದರು.

error: Content is protected !!
Scroll to Top