ಸಂಪುಟ ವಿಸ್ತರಣೆಯ ಕುರಿತು ಅಸಮಾಧಾನ ಇದ್ದವರು ವರಿಷ್ಠರಿಗೆ ದೂರು ನೀಡಲಿ ➤ ಸಿಎಂ ಬಿಎಸ್.ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ‌. 14. ಸಚಿವ ಸಂಪುಟ ರಚನೆಯ ಬಗ್ಗೆ ಯಾವ ಶಾಸಕರಿಗೆ ಅಸಮಾಧಾನ ಇದೆಯೋ ಅಂತವರು ದೆಹಲಿಗೆ ಹೋಗಿ ಪಕ್ಷದ ವರಿಷ್ಠರಿಗೆ ದೂರು ನೀಡಲಿ, ನನಗೆ ಅಭ್ಯಂತವಿಲ್ಲ ಎಂದು ಮುಖ್ಯಮಂತ್ರಿ ಬಿಎಸ್.ವೈ ತಿಳಿಸಿದ್ದಾರೆ‌.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಸಮಾಧಾನ ಇದ್ದವರು ವರಿಷ್ಠರಿಗೆ ದೂರು ನೀಡಲಿ ನನ್ನ ಅಭ್ಮತರವಿಲ್ಲ. ಸಚಿವ ಸ್ಥಾನ ವಂಚಿತರು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ಕೆಲಸ ಮಾಡೋದು ಬೇಡ, ಯಾವುದೇ ಶಾಸಕರು ಇದ್ದರೆ ದೆಹಲಿಗೆ ತೆರಳಿ ದೂರು ನೀಡಲಿ, ಈ ಬಗ್ಗೆ ವರಿಷ್ಠರು ನಿರ್ಧಾರ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

Also Read  ಕಡಬ: ರಸ್ತೆ ಬದಿ ನಿಂತಿದ್ದ ವೇಳೆ ಬಸ್ ಢಿಕ್ಕಿ ಪ್ರಕರಣ ➤ ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿ ಮೃತ್ಯು

error: Content is protected !!
Scroll to Top