ಮಕ್ಕಳಿಗೆ ವಿಷಕೊಟ್ಟು ನೇಣಿಗೇರಿದ ದಂಪತಿ

(ನ್ಯೂಸ್ ಕಡಬ) newskadaba.com ಬಳ್ಳಾರಿ, ಜ. 06. ಮಕ್ಕಳಿಗೆ ವಿಷಕೊಟ್ಟು ದಂಪತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗಾದಿಗನೂರು ಎಂಬಲ್ಲಿ ನಡೆದಿದೆ.

ಮೃತರನ್ನು ನಂಜುಂಡೇಶ್ವರ, ಪತ್ನಿ ಪಾರ್ವತಿ ಹಾಗೂ ಮಕ್ಕಳಾದ ಗೌತಮಿ(3), ಸ್ವರೂಪ್ (2) ಎಂದು ಗುರುತಿಸಲಾಗಿದೆ. ನಂಜುಂಡೇಶ್ವರ ಅವರು ಜಿಂದಾಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದರೆ. ಡೆತ್ ನೋಟ್ ಬರೆದು ಮಕ್ಕಳಿಗೆ ವಿಷಕೊಟ್ಟು ದಂಪತಿಗಳು ನೇಣು ಬಿಗಿದು ಆತ್ಮಹತ್ಯೆ ಮಾಡಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕ ಗಾದಿಗನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಉಪ್ಪಿನಂಗಡಿ ಠಾಣಾ ಎದುರಿನಲ್ಲೇ ಕಳ್ಳರ ಕೈಚಳಕ ➤‌ ಮೂರು ಅಂಗಡಿಗೆ ನುಗ್ಗಿದ ಕಳ್ಳರು

error: Content is protected !!
Scroll to Top