ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳ ದಿಢೀರ್ ದಾಳಿ ➤ ಓರ್ವ ಸಿಬ್ಬಂದಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ತಹಶೀಲ್ದಾರ್ ಕಛೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದ್ವಿತೀಯ ದರ್ಜೆ ಸಹಾಯಕ ಸಿಬ್ಬಂದಿಯೋರ್ವರನ್ನು ರೆಡ್‌ ಹ್ಯಾಂಡ್ ‌ಆಗಿ ಬಂಧಿಸಿದ ಘಟನೆ ಮಂಗಳವಾರ ನಡೆದಿದೆ.

ಬಂಧಿತ ಆರೋಪಿಯನ್ನು ರಫೀಕ್ ಅಬ್ದುಲ್(42) ಎಂದು ಗುರುತಿಸಲಾಗಿದೆ. ಕಚೇರಿಯ ಕೆಲಸ‌‌ಕ್ಕೆಂದು 40 ಸಾವಿರ ರೂ.‌ ಲಂಚದ ಬೇಡಿಕೆ ಇಟ್ಟಿದ್ದ ಎಂಬ ಆರೋಪದಡಿ ವ್ಯಕ್ತಿಯೋರ್ವರು ಎಸಿಬಿ ಕಚೇರಿಗೆ‌ ನೀಡಿದ್ದ ದೂರಿನಂತೆ ಸಿಬ್ಬಂದಿ ನಗದು ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ.

error: Content is protected !!

Join the Group

Join WhatsApp Group