ಮಂಗಳೂರು: ಶಾಲೆಯಲ್ಲಿ ಬೆಳೆದ ಸಸಿಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

(ನ್ಯೂಸ್ ಕಡಬ) newskadaba.com ಮಂಗಳೂರು, . 05.  ದಕ್ಷಿಣ ಕನ್ನಡ ಉನ್ನತ ಪ್ರಾಥಮಿಕ ಶಾಲೆಯ ನಾರ್ಲಾ ಪಡೀಲ್‌ನ ಶಾಲೆಯಲ್ಲಿ ಮಕ್ಕಳು ಹಲವಾರು ವರ್ಷಗಳಿಂದ ಮಕ್ಕಳು ನೆಟ್ಟು ಬೆಳೆಸಿದ ಹಣ್ಣುಗಳು ಮತ್ತು ತೆಂಗಿನಕಾಯಿಯ ಸಸಿಗಳನ್ನು ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿ ನಾಶಗೈದ ಘಟನೆ ನಡೆದಿದೆ.

ತಲಪಾಡಿ ಗ್ರಾಮ ಪಂಚಾಯತ್ ನಲ್ಲಿ ನಡೆದ ಜಮಾಬಂದಿ ಕಾರ್ಯಕ್ರಮದಲ್ಲಿ ಇಲ್ಲಿನ ದುರ್ಗಾ ಸೇವಾ ಸಮಿತಿ ಸದಸ್ಯರು ಈ ಹಿಂದೆ ಸಸಿಗಳು ಇರುವ ಪ್ರದೇಶಕ್ಕೆ ಕಾಂಪೌಂಡ್ ಹಾಕುವಂತೆ ಮನವಿ ಮಾಡಿದ್ದು, ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಪಂಚಾಯತ್ ಯಾವುದೇ ಕ್ರಮವನ್ನು ಈವರೆಗೂ ಕೈಗೊಂಡಿಲ್ಲ.

error: Content is protected !!
Scroll to Top