ಮಂಗಳೂರು :ನದಿಯಲ್ಲಿ ಅಪರಿಚಿತ ಶವ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.23: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಿರೆ ಸಮೀಪದ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.

ನದಿಯಲ್ಲಿ ಶವ ಕಂಡು ಕೂಡಲೇ ಸ್ಥಳೀಯರಾದ ಕರ್ನಿರೆಬೈಲು ಪ್ರದೇಶದ ರೋಷನ್ ಡಿಸೋಜ ಅವರು ಕಾರ್ನಾಡು ಆಪತ್ಬಾಂಧವ ಆಸಿಫ್ ಅವರಿಗೆ ಕರೆ ಮಾಡಿ ದಾಗ ತಕ್ಷಣ ಧಾವಿಸಿ ಬಂದ ಅವರು, ದೋಣಿಯ ಮೂಲಕ ಸಾಗಿ ಶವವನ್ನು ದಡ ಸೇರಿಸಿ ಮುಲ್ಕಿ ಪೊಲೀಸರ ನೆರವಿನಿಂದ ಮುಲ್ಕಿ ಆರೋಗ್ಯ ಸಮುದಾಯ ಕೇಂದ್ರದ ಶವಾಗಾರಕ್ಕೆ ಸಾಗಿಸಲಾಯಿತು.ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

 

Also Read  ಲಾಕ್ ಡೌನ್ ಹಿನ್ನೆಲೆ - 5 ತಿಂಗಳಿನಿಂದ ಸ್ತಬ್ಧವಾದ ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ

error: Content is protected !!
Scroll to Top