ಕಡಬ: ಇಚಿಲಂಪಾಡಿ ದೇವಸ್ಥಾನಕ್ಕೆ ಎಸ್. ಅಂಗಾರ ಭೇಟಿ

(ನ್ಯೂಸ್ ಕಡಬ) newskadaba.com ಕಡಬ, ಡಿ. 22. ತಾಲೂಕಿನ ಇಚಿಲಂಪಾಡಿಯ ಕುರಿಯಾಳಕೊಪ್ಪ ಶ್ರೀಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರು ಇಂದು ಭೇಟಿ ನೀಡಿದರು.

ಚುನಾವಣಾ ಸಮಯದಲ್ಲಿ ದಿಢೀರ್ ಭೇಟಿ ನೀಡಿದ ಅವರಿಗೆ ದೇವರ ದರ್ಶನದ ನಂತರ ಅರ್ಚಕರು ಹೂವಿನ ಹಾರ ಹಾಕಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ, ಸೀತಾರಾಮ ಗೌಡ ಪೊಸವಳಿಕೆ, ಪ್ರಕಾಶ್ ಎನ್.ಕೆ ಮೊದಲಾದವರು ಉಪಸ್ಥಿತರಿದ್ದರು.

Also Read  ಚಿಕ್ಕಬಳ್ಳಾಪುರ: ಶಂಕಿತ ಕೊರೋನ ಸೋಂಕಿನಿಂದ ವೃದ್ಧೆ ಮೃತ್ಯು

error: Content is protected !!
Scroll to Top