‘ಗುಡ್ಡೆದ ಭೂತ’ ಖ್ಯಾತಿಯ ನಟ, ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ವಿಧಿವಶ

(ನ್ಯೂಸ್ ಕಡಬ) newskadaba.com ಉಡುಪಿಡಿ. 07: ಪ್ರಸಿದ್ಧ ಗುಡ್ಡೆದ ಭೂತ ಧಾರಾವಾಹಿ ನಟ, ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ (79 ) ಇಂದು ಮಧ್ಯಾಹ್ನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.

 

ರಂಗ ನಿರ್ದೇಶಕರಾಗಿ, ಕಥೆಗಾರ, ಕವಿಯಾಗಿ, ನಟರಾಗಿದ್ದ ಅವರು ಉಡುಪಿಯ ಸಮೂಹ ಸಂಸ್ಥೆ ಸಂಸ್ಥಾಪಕರಾಗಿ,ನಾಟಕ, ನೃತ್ಯ ರೂಪಕ ಮೂಲಕ ರಾಜ್ಯಾದ್ಯಂತ ಜನಮನ್ನಣೆ ಗಳಿಸಿದ್ದರು. ನಾಡಿನಾದ್ಯಂತ 50 ಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಹೊಂದಿರುವ ಉದ್ಯಾವರ ಮಾಧವಾಚಾರ್ಯರು ರಾಜ್ಯೋತ್ಸವ, ರಂಗ ವಿಶಾರದ ಪ್ರಶಸ್ತಿಗೆ ಭಾಜನರಾಗಿದ್ದರು.

Also Read  ಪೊಲೀಸ್ರರ ಭಾರ ತಾಳಲಾರದೆ ಸ್ಥಳದಲ್ಲೇ ಚಿರತೆ ಸಾವು

 

 

error: Content is protected !!
Scroll to Top