ಕರಾವಳಿಯ ‘ಜ್ಯೋತಿ ಟಾಕೀಸ್’ ಇನ್ನು ನೆನಪು ಮಾತ್ರ

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 07: ಸರಿಸುಮಾರು 50 ವರ್ಷಗಳಿಂದ ನಗರದ ಪ್ರಸಿದ್ಧ ಲ್ಯಾಂಡ್ ಮಾರ್ಕ್ ಆಗಿದ್ದ, ಮಂಗಳೂರಿಗರಿಗೆ ಹೆಮ್ಮೆಯ ಗುರುತಾಗಿದ್ದ ‘ಜ್ಯೋತಿ ಟಾಕೀಸ್‘ ಎಂದು ಜನಪ್ರಿಯವಾಗಿರುವ ಜ್ಯೋತಿ ಚಿತ್ರಮಂದಿರ ಇನ್ನು ಬರೀ ನೆನಪಾಗಿ ಉಳಿಯಲಿದೆ. ತುಳು ಚಿತ್ರರಂಗದ ಕಲಾವಿದರ ಹಾಗೂ ತುಳು ಚಿತ್ರ ಪ್ರೇಮಿಗಳ ಕನಸಿನ ಟಾಕೀಸ್ ಆಗಿದ್ದ  ‘ಜ್ಯೋತಿ ಟಾಕೀಸ್ ಗೆ ಕೋವಿಡ್ 19 ಭರ ಸಿಡಿಲಿನಂತೆ ಅಪ್ಪಳಿಸಿದೆ. ಲಾಕ್‌ಡೌನ್ ಪರಿಣಾಮ ಮುಚ್ಚಲ್ಪಟ್ಟಿದ್ದ ಚಿತ್ರಮಂದಿರವಿನ್ನು ಶಾಶ್ವತವಾಗಿ ಮುಚ್ಚಲಿದೆ.

ಈ ಚಿತ್ರಮಂದಿರ ಅನೇಕ ಸಿನಿಮಾ ಪ್ರಿಯರಿಗೆ ಅದರಲ್ಲಿಯೂ ವಿಶೇಷವಾಗಿ ತುಳು ಸಿನೆಮಾ ಪ್ರಿಯರ ಅಚ್ಚುಮೆಚ್ಚಿನ ಚಿತ್ರಮಂದಿರವಾಗಿತ್ತು. ಕರ್ನಾಟಕ ಥಿಯೇಟರ್ಸ್ ಯುನಿಟ್ ಲಿಮಿಟೆಡ್ ಮುಂಬೈ ಮೂಲದ ಬಿಲ್ಡರ್ ಜೊತೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡಲು ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದವನ್ನು ಹಲವಾರು ವರ್ಷಗಳ ಹಿಂದೆ ಮಾಡಲಾಗಿತ್ತು ಆದರೆ ತಾಂತ್ರಿಕ ತೊಂದರೆಯಿಂದ ಇದುವರೆಗೆ ಅದನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗಲಿಲ್ಲ. ಈಗ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಚಿತ್ರಮಂದಿರ ಮುಚ್ಚಿರುವುದರಿಂದ,ಚಿತ್ರಮಂದಿರವನ್ನು ಇನ್ನೆಂದೂ ತೆರೆಯಲಾಗುವುದಿಲ್ಲ ಎಂದು ಹೇಳಲಾಗಿದೆ.. ವಾಣಿಜ್ಯ ಸಂಕೀರ್ಣದ ಕೆಲಸವು ಜನವರಿ ಅಥವಾ ಫೆಬ್ರವರಿ 2021 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

 

ಡಾ.ರಾಜ್‌ಕುಮಾರ್, ಡಾ.ವಿಷ್ಣುವರ್ಧನ್,ಅಂಬರೀಶ್ ಮತ್ತಿತರರು ಸೇರಿದಂತೆ ಹಲವಾರು ಸ್ಯಾಂಡಲ್ ವುಡ್ ಚಲನಚಿತ್ರ ತಾರೆಯರು ತಮ್ಮ ಚಲನಚಿತ್ರಗಳ ಬಿಡುಗಡೆಯ ಸಮಯದಲ್ಲಿ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಚಿತ್ರಮಂದಿರಕ್ಕೆ 50 ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿದ್ದರೂ, ಕೆಲವು ಮಲ್ಟಿಪ್ಲೆಕ್ಸ್ ಪ್ರದರ್ಶನಗಳನ್ನು ಹೊರತುಪಡಿಸಿ ತುಳು ಚಲನಚಿತ್ರಗಳನ್ನು ಪ್ರದರ್ಶಿಸಿದ ಏಕೈಕ ಚಿತ್ರಮಂದಿರ ಇದು. ಇಲ್ಲಿಯವರೆಗೆ, ತುಳು ಚಲನಚಿತ್ರಗಳ ನಿರ್ಮಾಪಕರು ಜ್ಯೋತಿ ಚಿತ್ರಮಂದಿರಕ್ಕೆ ಮೊದಲ ಆದ್ಯತೆ ನೀಡುತ್ತಾ ಬಂದಿದ್ದಾರೆ.

 

error: Content is protected !!

Join the Group

Join WhatsApp Group