ಕುಕ್ಕೆ ಸುಬ್ರಹ್ಮಣ್ಯ: ಆಶ್ಲೇಷ ಪೂಜೆಗಾಗಿ ಹರಿದು ಬಂದ ಭಕ್ತಸಾಗರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ. 06: ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರ ದಿನವಾದ ಇಂದು ಆಶ್ಲೇಷ ಪೂಜೆ ನೆರವೇರಿಸಲು ಹೆಚ್ಚಿನ ಜನ ಸಂಖ್ಯೆ ಕಂಡುಬಂದಿದ್ದು, ದೇವಾಲಯದ ಸುತ್ತಮುತ್ತ ಜನ ಸಾಗರ ಹರಿದು ಬಂದಿರುವುದು ಕಂಡು ಬಂದಿದೆ.

 

 

ದೇವಾಲಯದ ಹೊರಾಂಗಣದಲ್ಲಿ ರಶೀದಿಗಾಗಿ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಸೀಮಿತ ಸಂಖ್ಯೆಯಲ್ಲಿ ಸೇವಾ ರಶೀದಿ ವಿತರಿಸುವ ಕಾರಣ ದೂರದಿಂದ ಬಂದ ಭಕ್ತರಿಗೆ ರಶೀದಿ ಸಿಗದೇ ಸೇವಾ ಕೌಂಟರ್ ಸಿಬ್ಬಂದಿಗಳ ಜೊತೆ ವಾಗ್ವಾದವಾದ ಘಟನೆ ನಡೆದಿದೆ.

Also Read   ಹುಡುಗಿಯರನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ

 

error: Content is protected !!
Scroll to Top