ಸವಣೂರು: ಶ್ರೀ ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಸವಣೂರು, ಜೂ.06. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ಕಿಶೋರಿ ಎಸ್ ರೈಯವರಿಗೆ ಮೈಸೂರು ಕೆ.ಆರ್.ನಗರಕ್ಕೆ ವರ್ಗಾವಣೆಗೊಂಡಿದ್ದು ಅವರನ್ನು ಸವಣೂರು ಹಿ.ಪ್ರಾ.ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಲಾಯಿತು.

ಗೌರವ ಸ್ವೀಕರಿಸಿದ ಕಿಶೋರಿ ಎಸ್ ರೈ ಮಾತನಾಡಿ,ಕಳೆದ ಒಂದೂವರೆ ವರ್ಷದಿಂದ ಸವಣೂರು ವಲಯದಲ್ಲಿ ಕರ್ತವ್ಯ ನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತಳಾಗಿದ್ದೇನೆ,ಸವಣೂರು ವಲಯವು ಅತ್ಯುತ್ತಮ ವಲಯವಾಗಿದ್ದು ಗ್ರಾಮಾಭಿವೃದ್ದಿ ಯೋಜನೆಗೆ ಉತ್ತಮ ಪ್ರೋತ್ಸಾಹ ಮತ್ತು ನಿರಂತರ ಸಹಕಾರ ನೀಡಿದ್ದಾರೆ ಎಂದರು.
ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ,ಕಿಶೋರಿ ರೈಯವರು ಕರ್ತವ್ಯವನ್ನು ದೇವರೆಂದು ಪರಿಗಣಿಸಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು. ವೇದಿಕೆಯಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ನಾಮನಿರ್ದೇಶಿತ ಸದಸ್ಯ ಗಿರಿಶಂಕರ್ ಸುಲಾಯ , ಯೋಜನೆಯ ಸವಣೂರು ಎ ಒಕ್ಕೂಟದ ವೆಂಕಪ್ಪ ಗೌಡ ಅಡೀಲು ವಲಯದ ಅಧ್ಯಕ್ಷ ಕುಸುಮಾಧರ ಸಾಲ್ಯಾನ್ , ಸವಣೂರು ಪ್ರಾ.ಕೃ.ಪ.ಸ.ಸಂ.ದ ನಿರ್ದೆಶಕ ನಾರಾಯಣ ಗೌಡ ಪೂವ , ಸವಣೂರು ಗ್ರಾ.ಪಂ.ಸದಸ್ಯೆ ರಾಜೀವಿ ವಿಠಲ ಶೆಟ್ಟಿ ಕೆಡೆಂಜಿ , ಯೋಜನೆಯ ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!
Scroll to Top