ಉಡುಪಿ: ಬಾವಿಗೆ ಬಿದ್ದ ಜಿಂಕೆ ರಕ್ಷಿಸಿದ ಅರಣ್ಯ ಅಧಿಕಾರಿಗಗಳು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04:  ಉಡುಪಿ ಯ ಕುಂದಾಪುರದ ಕಂದಾವರ ಗ್ರಾಮದ ಹಿರಿಕೆರೆ ಯಲ್ಲಿ ಜಿಂಕೆ ಬಾವಿಗೆ ಬಿದ್ದ ಘಟನೆ ನಡೆದಿದೆ.

ಸರಿಸುಮಾರು ಇಪ್ಪತ್ತು ಗಂಟೆಗಳ ಕಾಲ ಬಾವಿಯಲ್ಲಿ ಒದ್ದಾಡಿದ ಜಿಂಕೆಮರಿ, ವಿಷಯ ತಿಳಿದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸತತ ಪ್ರಯತ್ನದಿಂದ ಬಾವಿಯಿಂದ ಜಿಂಕೆಯನ್ನು ಮೇಲೆತ್ತಿ ಯಶಸ್ವಿಯಾದರು. ಕಂದಾವರ ದ ರಾಜೇಂದ್ರ ಅವರ ಮನೆಯ ಬಾವಿಗೆ ಜಿಂಕೆ ಬಿದ್ದಿತ್ತು. ಜಿಂಕೆಯನ್ನು ರಕ್ಷಣೆ ಮಾಡುವಲ್ಲಿ ಶ್ರಮಿಸಿದ ಉದಯ ಉಪಾರಣ್ಯ ಅಧಿಕಾರಿ ಸೋಮಶೇಖರ್ ಫಾರೆಸ್ಟ್ ವಾಚರ್ ಅಶೋಕ ಡೈವರ್ ಹಾಗೂ ಸ್ಥಳೀಯರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

 

error: Content is protected !!

Join the Group

Join WhatsApp Group