ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಶೀಘ್ರ ಆಗಬೇಕಿದೆ ➤ ರಾಜ್ಯ ಸರ್ಕಾರಕ್ಕೆ  ಆಗ್ರಹಿಸಿದ ಪೇಜಾವರ ಶ್ರೀ 

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04: ರಾಜ್ಯದಲ್ಲಿ ಬಿಜೆಪಿ ಸಕಾರವಿದ್ದರು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಲ್ಲಿ ನಾಯಕರು ಎಡವಿದ್ದಾರೆ ಎಂದು ಈಗಾಗಲೇ ಹಲವಾರು ಸಂಘಟನೆಗಳಿಂದ ಹಾಗೂ ಹಲವು ಪಕ್ಷದ ಮುಖಂಡರಿಂದ ಕೂಗುಗಳು ಕೇಳಿ ಬರುತಿದೆ.

 

ಈ ನಡುವೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು ಎಂದು ಆಗ್ರಹಿಸಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ ಅವರು ಕೆಲ ಸಬೂಬುಗಳನ್ನು ಹೇಳಿ ಈ ಕಾಯ್ದೆ ಜಾರಿಗೆ ಬಾರದಂತೆ ತಡೆ ಒಡ್ಡಲಾಗಿದೆ.ಭರತ ಭೂಮಿಯಲ್ಲಿ ಗೋವುಗಳು ಪರಮ ಪೂಜನೀಯ ಆಗಿವೆ ನಮ್ಮ ಬದುಕಿಗೆ ಗೋಗಳು ಅತ್ಯಂತ ಸಮೀಪ ಆಗಿವೆ.ಗೋವಂಶ ಉಳಿಸಲು ರಾಜ್ಯ ಸರ್ಕಾರ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

error: Content is protected !!

Join the Group

Join WhatsApp Group