ಮಂಗಳೂರು: ದೀಪಾವಳಿ ಸಂಭ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, . 16. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ದೇವಾಲಯಗಳಿಗೆ ಶನಿವಾರ ಮತ್ತು ಭಾನುವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿ, ದೇವರ ದರ್ಶನ ಪಡೆದರು.

 

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿತುಲಾಭಾರಮತ್ತುಅನ್ನಪ್ರಾಶಾನಆಚರಣೆಗಳನ್ನು ನವೆಂಬರ್ 15 ರಿಂದ ಆರಂಭಿಸಲಾಗಿದ್ದು, ಕೊರೋನಾ ಭೀತಿಯಿಂದಾಗಿ ಮುಚ್ಚಲಾಗಿದ್ದ ದೇವಾಲಯವು ಒಂದು ತಿಂಗಳ ಹಿಂದೆ ಮತ್ತೆ ತೆರೆಯಲಾಗಿದೆ. ಸುಮಾರು ಆರು ತಿಂಗಳು ಮುಚ್ಚಲಾಗಿದ್ದ ಉಡುಪಿ ಶ್ರೀ ಕೃಷ್ಣ ಮಠವು ಸೆಪ್ಟೆಂಬರ್ 28 ರಂದು ಮತ್ತೆ ಬಾಗಿಲು ತೆರೆದಿದ್ದು ಮಠಕ್ಕೆ ನವೆಂಬರ್‌ 15 ರಂದು ಸುಮಾರು 5,000 ಜನರು ಭೇಟಿ ನೀಡಿದ್ದಾರೆ.

Scroll to Top