► ಉಡುಪಿ: ಮರಳು ಲಾರಿಗೆ ಬಾಲಕ ಬಲಿ

(ನ್ಯೂಸ್ ಕಡಬ) newskadaba.com ಉಡುಪಿ, ಅ.04. ಮರಳು ಲಾರಿ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಬ್ರಹ್ಮಾವರ ಎಸ್ಎಂಎಸ್ ಶಾಲೆ ಬಳಿ ಮಂಗಳವಾರದಂದು ನಡೆದಿದೆ.

ಮೃತ ಬಾಲಕನನ್ನು ಬಾರ್ಕೂರು ನಿವಾಸಿ ಅನೀಶ್(15) ಎಂದು ಗುರುತಿಸಲಾಗಿದೆ. ಈತ ಟ್ಯೂಷನ್ ಗೆಂದು ತೆರಳಿದ್ದು, ಬಸ್ಸಿನಿಂದಿಳಿದು ರಸ್ತೆ ದಾಟುತ್ತಿದ್ದಾಗ ಉಡುಪಿ ಕಡೆ ತೆರಳುತ್ತಿದ್ದ ಮರಳು ಸಾಗಾಟದ ಲಾರಿ ಢಿಕ್ಕಿ ಹೊಡೆದು ಬಾಲಕನನ್ನು 50 ಮೀಟರ್‍ ವರೆಗೆ ಎಳೆದೊಯ್ದಿದೆ. ಘಟನೆಯಲ್ಲಿ ಅನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Also Read  'ಕೋಟಿ ಚೆನ್ನಯ್ಯ' ಏರ್ ಪೋರ್ಟ್ ಗೆ ಸುಸ್ವಾಗತ' ➤ ಹೋರ್ಡಿಂಗ್ಸ್ ಗಳನ್ನ ಅಳವಡಿಸಿ ಯುವ ಕಾಂಗ್ರೆಸ್ ನಿಂದ ಪ್ರತಿಭಟನೆ

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top