ಹರಿಹರ: ಆರೋಗ್ಯ ಭಾರತಿ ಪ್ರಾಯೋಜಿತ ಮನೆಮದ್ದು ಕಾರ್ಯಗಾರ

(ನ್ಯೂಸ್ ಕಡಬ) newskadaba.com ಹರಿಹರ.13: ಕಳೆದ ದಿನ ಹರಿಹರ ದೇವಸ್ಥಾನದಲ್ಲಿ ಆರೋಗ್ಯ ಭಾರತಿ ಪ್ರಾಯೋಜಿತ ಮನೆಮದ್ದು ಕಾರ್ಯಗಾರ ಕಾರ್ಯಕ್ರಮವನ್ನು ಹರಿಹರಪಲ್ಲತ್ತಡ್ಕ ಕೇಶವ ಮೂರ್ತಿ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

 

 

ಕಾರ್ಯಕ್ರಮದಲ್ಲಿ ಮೈಸೂರಿನ ಡಾ. ಮಂಜುನಾಥ್ ಸಂಪನ್ಮೂಲ ವ್ಯಕ್ತಿಯಾಗಿದ್ದು, ವಿವಿಧ ಗಿಡಮೂಲಿಕೆಗಳ, ಸಂಬಾರು ವಸ್ತುಗಳ ಪರಿಚಯದ, ಉಪಯೋಗಗಳನ್ನು ಪ್ರಾಯೋಗಿಕವಾಗಿ ತಿಳಿಸಿಕೊಟ್ಟರು. ಹಾಗೂ ಆರೋಗ್ಯ ಕಾಪಾಡುವ ಬಗ್ಗೆ ಮಾಗಿತಿ ನೀಡಿದರು. ಕೇಂದ್ರ ಕ್ಷೇತ್ರ ಸಂಯೋಜಕರಾದ ಸದಾಶಿವ ಬೆಂಗಳೂರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Also Read  ಮಂಗಳೂರು: ಸ್ಕೂಟರ್-ಟೆಂಪೊ ನಡುವೆ ಅಪಘಾತ; ಸವಾರ ಸಾವು

 

 

error: Content is protected !!
Scroll to Top