ಪಂಜ: ಮೂಲಭೂತ ಸಮಸ್ಯೆಯ ಬಗ್ಗೆ ಪ್ರಧಾನಮಂತ್ರಿಗೆ ಸಿ.ಡಿ ಕಳುಹಿಸಿದ ಹೋರಾಟ ಸಮಿತಿ



(ನ್ಯೂಸ್ ಕಡಬ) newskadaba.com ಪಂಜ.10: ಮೂಲಭೂತ ಸಮಸ್ಯೆಯ ಬಗ್ಗೆ ವಿವರಿಸಿ ಕಮಿಲ ಮೊಗ್ರ ಬಳ್ಳಕ್ಕದ ನಾಗರಿಕ ಹೋರಾಟ ಕ್ರಿಯಾ ಸಮಿತಿ ಸದಸ್ಯರಿಂದ ಸಿ.ಡಿ ತಯಾರಿಸಲಾಗಿತ್ತು.







 

ಮೊಗ್ರ ಹೊಳೆಗೆ ಸೇತುವೆ ರಚನೆಯ ಬೇಡಿಕೆ ಹಲವಾರು ವರ್ಷಗಳಿಂದ ಇದ್ದರೂ ಇದುವರೆಗೂ ಈಡೇರಿಕೆಯಾಗಿಲ್ಲ. ಹೀಗಾಗಿ ಸಮಸ್ಯೆಯಗುತ್ತಿದೆ. ಅಲ್ಲದೇ ಗುತ್ತಿಗಾರು-ಕಮಿಲ-ಬಲ್ಪ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇಡೀ ರಸ್ತೆ ಡಾಮರೀಕರಣ ಕಂಡಿಲ್ಲ. ಈಗ ಕಮಿಲ ಹಾಗೂ ಕಮಿಲ- ಬಲ್ಪ ರಸ್ತೆ ತೀರಾ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಓಡಾಡಲು ತೀರಾ ಸಂಕಷ್ಟವಾಗಿದೆ. ಬಳ್ಪದಿಂದ ಗುತ್ತಿಗೆದಾರರು ಸಂಪರ್ಕಿಸುವ ಈ ರಸ್ತೆ ಹೊಂಡ ಗುಂಡಿಗಳಿಂದ ಆವರಿಸಿರುವ  ಕಮಿಲ ರಸ್ತೆ ಜನರ ನೆಮ್ಮದಿಗೆ ಭಂಗ ಮಾಡಿದೆ. ಯಾವುದೇ ತುರ್ತು ಸಂದರ್ಭದಲ್ಲಿ ಏನೂ ಮಾಡಲಾಗದೆ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಸುಳ್ಯ-ಸುಬ್ರಹ್ಮಣ್ಯ ಹಾಗೂ ಪುತ್ತೂರು ಸುಬ್ರಹ್ಮಣ್ಯ ಹೀಗೆ ಎರಡು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದೆ. ಕುಗ್ರಾಮವಾಗಿರುವ ಕಮಿಲ ಗ್ರಾಮದ ಜನರಿಗೆ ಸಾಕಷ್ಟು ಸಮಸ್ಯೆಗಳಿದ್ದರೂ, ಕೇವಲ ಇರುವ ರಸ್ತೆಯನ್ನು ದುರಸ್ತಿಪಡಿಸಿ ಎನ್ನುವ ಬೇಡಿಕೆಗೆ ಸರಕಾರ ಈ ವರೆಗೂ ಸ್ಪಂದಿಸಿಲ್ಲ. ಈವರೆಗೆ ಅದೆಷ್ಟೋ ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಯಾವುದೇ ಬಿಡಿಕಾಸುಪ್ರಯೋಜನವೂ ಆಗಿಲ್ಲ. ಆದರೂ ಕಮಿಲ ಗ್ರಾಮಸ್ಥರು ಇನ್ನೂ ಮನವಿ ಸಲ್ಲಿಸುತ್ತಲೇ ಇದ್ದಾರೆ.






 

 

 

ಇನ್ನು ಬಳ್ಳಕ್ಕ ಪ್ರದೇಶದಲ್ಲಿ ಕುಡಿಯುವ ನೀರಿನ ಟ್ಯಾಂಕ್ ದುರಸ್ಥಿ, ನೀರಿನ ವ್ಯವಸ್ಥೆ ಇಂದಿಗೂ ಸರಿಯಾಗಿಲ್ಲ. ಭರವಸೆಗಳು ಮಾತ್ರವೇ ಲಭ್ಯ ವಾಗಿದ್ದು, ವ್ಯವಸ್ಥೆಯಾಗಿಲ್ಲ ಎಂದು ಗ್ರಾಮಾಸ್ಥರು ಹೇಳಿದರು. ಈ ಎಲ್ಲಾ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ  ಸಿ.ಡಿ ತಯಾರಿಸಿದ ಪ್ರತಿಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಅಂಚೆ ಮೂಲಕ ಇಂದು ಕಳುಹಿಸಲಾಗಿತ್ತು. ಅಂಚೆ ಕಛೇರಿಗೆ ಆಗಮಿಸಿದ ಸಮಿತಿಯ ಸದಸ್ಯರುಗಳು ಸಿ.ಡಿಯನ್ನು ಕಳುಹಿಸಿದರು.

 

 

error: Content is protected !!
Scroll to Top