ಆಟೋ ಚಾಲಕನಿಗೆ ಚೂರಿ ಇರಿತ ➤ ಆರೋಪಿ ಎಸ್ಕೇಪ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ . 02: ಬಾಡಿಗೆ ನೆಪದಲ್ಲಿ ಕರೆದೊಯ್ದು ಆಟೋ ಚಾಲಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಬೆಳ್ತಂಗಡಿಯ ಸೀಟು ಎಂಬಲ್ಲಿ ಭಾನುವಾರ ನಡೆದಿದೆ.

ಉಜಿರೆ ಗ್ರಾಮದ ಗುರಿಪಳ್ಳ ಮಾಳಿಗೆ ಮನೆಯ ನಿವಾಸಿ ಸದಾನಂದ (58) ಎಂಬುವರ ಆಟೋ ರಿಕ್ಷಾವನ್ನು ಬಾಡಿಗೆ ಮಾಡಿಕೊಂಡು ಆರೋಪಿ ಗುರಿಪಳ್ಳ ನಿವಾಸಿ ಚಂದ್ರಶೇಖರ್ ಬೆಳ್ತಂಗಡಿಯ ನಿಡಿಗಲ್ ಬಳಿಯ ಸೀಟು ಎಂಬಲ್ಲಿ ಹೋಗಿದ್ದಾನೆ. ಸೀಟು ಕಾಡಿನ ಹತ್ತಿರವಾಗುತ್ತಿದ್ದಂತೆ ಆಟೋ ಚಾಲಕನಿಗೆ ಚೂರಿಯಿಂದ ಇರಿದು ಆರೋಪಿ ಪರಾರಿಯಾಗಿದ್ದಾನೆ.ಆಟೋ ಚಾಳಕ ಸದಾನಂದ ಎಂಬುವರ ಕುತ್ತಿಗೆ ಭಾಗಕ್ಕೆ ಗಾಯವಾಘಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ತೆಗೆ ದಾಖಲಿಸಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ .

Also Read  ಕಾಡ್ಗಿಚ್ಚಿಗೆ ಹತ್ತಾರು ಎಕರೆ ಅರಣ್ಯ, ಪ್ರಾಣಿ-ಪಕ್ಷಿಗಳು ಸುಟ್ಟು ಕರಕಲು

 

error: Content is protected !!
Scroll to Top