ಬಹ್ಮಾವರ :ತಾಂತ್ರೀಕ ದೋಷದಿಂದ ಸೇವಾ ಸಿಂಧು ಕಛೇರಿಗೆ ನುಗ್ಗಿದ್ದ ಖಾಸಗಿ ಬಸ್

(ನ್ಯೂಸ್ ಕಡಬ) newskadaba.com ಬಹ್ಮಾವರ, ಅ. 11: ಚಾಲಕನ ನಿಯಂತ್ರಣ ತಪ್ಪಿದ ಬಸ್ ಸೇವಾಸಿಂಧು ಕಚೇರಿಯೊಳಗೆ ನುಗ್ಗಿದ ಘಟನೆ ಬಹ್ಮಾವರ ಬಸ್ ನಿಲ್ದಾದಲ್ಲಿಇಂಧು ನಡೆದಿದೆ.  ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಖಾಸಗಿ ಬಸ್ ಸ್ಟಾರ್ಟ್ ಆಗದ್ದೆ ಇದ್ದ ಕಾರಣ ಬೇರೆ ಬಸ್ ನ ಸಿಬ್ಬಂದಿ ಮತ್ತು ಸಾರ್ವಜನಿಕರು ಹಿಂದಿನಿಂದ ದೂಡಿ ಸ್ಟಾರ್ಟ್ ಮಾಡಲು ಯತ್ನಿಸಿದರು.

ಇಳಿಜಾರಿದ್ದ ಕಾರಣ ಬಸ್ ಸ್ವಲ್ಪ ವೇಗವಾಗಿ ಚಲಿಸಿತ್ತು. ಈ ಸಂದರ್ಭ ಎದುರಿದ್ದ ತಾಲೂಕು ಪಂಚಾಯತ್ ಕಟ್ಟಡದ ಕಡೆಗೆ ಸಾಗಿದೆ. ಬಸ್ ನಲ್ಲಿ ತಾತ್ರೀಕ ದೋಷಾ ಕಂಡು ಬಂದ ಪರಿಣಾಮ ಬ್ರೇಕ್ ಸಿಗದೆ, ಅಲ್ಲಿದ್ದ ಸೇವಾ ಸಿಂಧು ಕಟ್ಟಡಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಸ್ ನಲ್ಲಿದ್ದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇನ್ನು, ಭಾನುವಾರವಾದ್ದರಿಂದ ಸೇವಾ ಸಿಂಧು ಕಛೇರಿಯಲ್ಲಿ ಯಾರು ಇಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.

 

 

error: Content is protected !!

Join the Group

Join WhatsApp Group