ಸುಳ್ಯ: ಹತ್ರಾಸ್‌ ಯುವತಿಯ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಳ್ಯ, ಅ.10: ಉತ್ತರ ಪ್ರದೇಶದ ಹತ್ರಾಸ್‌ ಯುವತಿಯ ಅತ್ಯಾಚಾರ, ಕೊಲೆ ಖಂಡಿಸಿ ಸುಳ್ಯದಲ್ಲಿ ಇಂದು ಪ್ರತಿಭಟನೆ ನಡೆಸಿದ್ದಾರೆ.

 

 

ಈ ದೇಶದಲ್ಲಿ ನಡೆಯುತ್ತಿರುವ ಅನ್ಯಾಯ, ದೌರ್ಜನ್ಯದ ವಿರುದ್ಧ ಕಾಂಗ್ರೆಸ್‌ ಪಕ್ಷ ನಿರಂತರ ಹೋರಾಟ ನಡೆಸಿ, ಅನ್ಯಾಯ ಆದವರಿಗೆ ನ್ಯಾಯ ಸಿಗುವ ತನಕ ನಮ್ಮ ಹೋರಾಟ ಇರುತ್ತದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಹೇಳಿದರು. ಸಮಾರಂಭದಲ್ಲಿ ನಾಯಕರಾದ ಯು.ಟಿ. ಖಾದರ್‌, ಶಕುಂತಲಾ ಶೆಟ್ಟಿ, ಶಾಲೆಟ್‌ ಪಿಂಟೋ, ಎಂ.ಬಿ.ಸದಾಶಿವ, ಕೆ.ಪಿ.ಜಾನಿ, ಎನ್.‌ ಜಯಪ್ರಕಾಶ್‌ ರೈ ಮೊದಲಾದವರು ಉಪಸ್ಥಿತರಿದ್ದರು.

 

Scroll to Top