ಪುತ್ತೂರಿನಲ್ಲಿ ನಡೆದ ಒಂಟಿ ವೃದ್ದೆಯ ಹತ್ಯೆ ಪ್ರಕರಣ ➤ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 02. ನಾಲ್ಕು ವರ್ಷಗಳ ಹಿಂದೆ ಪುತ್ತೂರಿನ ಹಾರಾಡಿಯ ಬಾಡಿಗೆ ಮನೆಯಲ್ಲಿದ್ದ ಒಂಟಿ ವೃದ್ದೆ ವಿನೋದಿನಿ (77) ಯವರ ಕೊಲೆ ಗೈದ ಅಪರಾಧಿ ಲಕ್ಷ್ಮಣ ನಾಯಕ್ (32) ಎಂಬಾತನಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ದಂಡ ವಿಧಿಸಿ ಆದೇಶಿಸಿದೆ.

ನಾಲ್ಕು ವರ್ಷಗಳ ಹಿಂದೆ ಪುತ್ತೂರಿನ ಹಾರಾಡಿಯ ಬಾಡಿಗೆ ಮನೆಯಲ್ಲಿದ್ದ ಒಂಟಿ ವೃದ್ದೆ ವಿನೋದಿನಿ (77) ಯವರ, ಕೈ,ಕಾಲು, ಮುಖವನ್ನು ಬಟ್ಟೆಯಿಂದ ಕಟ್ಟಿ ಕೊಲೆ ಮಾಡಿ ಅವರ ಕುತ್ತಿಗೆ ಮತ್ತು ಕಿವಿಯಲ್ಲಿದ್ದ ಸುಮಾರು 50 ಸಾವಿರ ಬೆಲೆಬಾಳುವ ಚಿನ್ನಾಭರಣ ದೋಚಿ, ಕೊಲೆಗೈದು ಪರಾರಿಯಾಗಿದ್ದ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮಿತ್ತನಡ್ಕ ನಿವಾಸಿ ಆರೋಪಿ ಲಕ್ಷ್ಮಣ ನಾಯಕ್ (32) ಎಂಬಾತನಿಗೆ , ಸಾಕ್ಷ್ಯ ಆಧಾರಗಳನ್ನು ಪರಿಶೀಲಿಸಿ ಅಪರಾಧಿಗೆ ಕೊಲೆ ಅಪರಾದಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ದರೋಡೆ ಅಪರಾಧಕ್ಕಾಗಿ 10 ವರ್ಷ ಜೈಲು ಹಾಗೂ 10 ಸಾವಿರ ರೂ ದಂಢ ವಿಧಿಸಿ ಆದೇಶಸಿಸಲಾಗಿದೆ.

 

 

 

error: Content is protected !!

Join the Group

Join WhatsApp Group