ಮಂಗಳೂರು: ತಪ್ಪಿದ ಭಾರೀ ವಿಮಾನ ದುರಂತ ► ಕತಾರ್ ತೆರಳಬೇಕಿದ್ದ ವಿಮಾನಕ್ಕೆ ಆಕಾಶದಲ್ಲಿ ತಾಂತ್ರಿಕ ದೋಷ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.22. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೋಹಾ ಕತಾರ್ ಗೆ ಹೊರಟ ವಿಮಾನವು ಕೆಲವೇ ನಿಮಿಷಗಳಲ್ಲಿ ಎಂಜಿನ್ ನಲ್ಲಿ ಉಂಟಾದ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಗುರುವಾರದಂದು ನಡೆದಿದೆ.

ಕತರ್ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಸಂಜೆ ಆರು ಗಂಟೆ ವೇಳೆಗೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಿಂದ ಹೊರಟಿತ್ತು. ಹೊರಟ ಕೆಲವೇ ಕ್ಷಣಗಳಲ್ಲಿ ಬೃಹತ್ ಶಬ್ದವೊಂದು ಕೇಳಿಬಂದಿದ್ದು ಎಂಜಿನ್ ನಡುವೆ ದೋಷವಿರುವುದನ್ನು ಅರಿತ ಪೈಲಟ್ ಸಮಯ ಪ್ರಜ್ಞೆ ಮೆರೆದು ವಿಮಾನವನ್ನು ಮರಳಿ ಬಜ್ಪೆ ವಿಮಾನ ನಿಲ್ದಾಣದಲ್ಲೇ ತುರ್ತು ಭೂಸ್ಪರ್ಶ ಮಾಡುವಲ್ಲಿ ಸಫಲರಾದರು. ವಿಮಾನದಲ್ಲಿ ಸುಮಾರು ೧೭೦ ಮಂದಿ ಪ್ರಯಾಣಿಕರಿದ್ದು, ಪ್ರಯಾಣಿಕರಿಗೆ ವಿಮಾನ ಕಂಪನಿಯ ವತಿಯಿಂದ ನಗರದ ಹೋಟೆಲ್ ನಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರದಂದು ಬೆಳಿಗ್ಗೆ ಕಂಪನಿಯು ಬದಲಿ ವಿಮಾನದ ವ್ಯವಸ್ಥೆಯನ್ನು ಕಲ್ಪಿಸಿದೆ.

Also Read  ಮಕ್ಕಳಿಗೆ ಉಚಿತವಾಗಿ ಆಪ್ತ ಸಮಾಲೋಚನೆ ➤ ಟೋಲ್ ಫ್ರೀ ಸಂಖ್ಯೆ 14499 ಕರೆ ಮಾಡಿ

 

error: Content is protected !!
Scroll to Top