ಎಸ್ಕೆಎಸ್ಎಸ್ಎಫ್ ಮಾಣಿ ಕ್ಲಸ್ಟರ್ ವತಿಯಿಂದ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 27:  ಎಸ್ ಕೆ ಎಸ್ ಎಸ್ ಎಫ್ ಮಾಣಿ ಕ್ಲಸ್ಟರ್ ವತಿಯಿಂದ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಯಿತು.

ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಗಿಡಗಂಟಿಗಳು ಬೆಳೆದು ನಿಂತಿದ್ದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆ ಆಗಕೂಡದು ಎಂಬ ಉದ್ದೇಶದಿಂದ ಎಸ್ ಕೆ ಎಸ್ ಎಸ್ ಎಫ್ ಮಾಣಿ ಕ್ಲಸ್ಟರ್ ನ ವಿಖಾಯ ಸದಸ್ಯರು ಬೆಳಿಗ್ಗೆನಿಂದಲೇ ಸ್ವಚ್ಛತಾ ಕಾರ್ಯ ಕೈಗೆತ್ತಿಕೊಂಡರು. ಈ ಸಂದರ್ಭ ಅಧ್ಯಕ್ಷ ಸತ್ತಾರ್ ಕಡೇಶಿವಾಲಯ, ಪ್ರಧಾನ ಕಾರ್ಯದರ್ಶಿ ನಿಸಾರ್ ಮುಸ್ಲಿಯಾರ್, ಮೂಸ ಕರೀಂ ಮಾಣಿ, ಜಿಲ್ಲಾ ಸಮಿತಿ ಸದಸ್ಯರಾದ ಮುಹಮ್ಮದ್ ಅಲಿ ಮುಸ್ಲಿಯಾರ್,  ಅಜೀಜ್ ಗಡಿಯಾರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಇಬ್ರಾಹಿಮ್ ಕೆ ಮಾಣಿ, ಸುದೀಪ್ ಕುಮಾರ್ ಶೆಟ್ಟಿ ಮಾಣಿ ಮೊದಲಾದವರು ಉಪಸ್ಥಿತರಿದ್ದರು.

Also Read  ಕಡಬ: ಮೃತ ಚಾಲಕ ಹರೀಶ್ ಕುಟುಂಬಕ್ಕೆ ಧನಸಹಾಯ

 

 

 

error: Content is protected !!
Scroll to Top