ಪ್ಲಾಸ್ಮಾದಾನ ಮಾನವೀಯತೆ ಮೆರೆದ ಕಡಬದ ಬ್ಯಾಂಕ್ ಸಿಬ್ಬಂದಿ ➤ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ

(ನ್ಯೂಸ್ ಕಡಬ) newskadaba.com ಕಡಬ, ಸೆ.16:  ಕೊರೊನಾ ಸೋಂಕಿಗೊಳಗಾಗಿದ್ದ ವ್ಯಕ್ತಿಯೊಬ್ಬರಿಗೆ, ಕಡಬದ ಸಹಕಾರಿ ಬ್ಯಾಂಕ್‍ನ ಸಿಬ್ಬಂದಿಯೋರ್ವರು ಪ್ಲಾಸ್ಮಾದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

 


ಕಡಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಬ್ಬಂದಿ ರಾಧೇಶ್ ನಿಡ್ಡೋ ರವರು ನಿವೃತ್ತ ಅರಣ್ಯ ರಕ್ಷಕರಾದ ಗೋಳಿತ್ತೊಟ್ಟು ನಿವಾಸಿ ಜತ್ತಣ್ಣ ಗೌಡರಿಗೆ o+ ಪ್ಲಾಸ್ಮಾ ದಾನ ಮಾಡಿದ್ದಾರೆ. ಜತ್ತಣ್ಣ ಗೌಡರು ಎಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದ ದಿನ ಪ್ಲಾಸ್ಮಾದಾನ ಮಾಡಿದ್ದಾರೆ. ಇವರು ಮಾಡಿದ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

 

error: Content is protected !!

Join the Group

Join WhatsApp Group