ಎಸ್ಸೆಸ್ಸೆಲ್ಸಿ ಸಾಧಕರಿಗೆ, ಕೊರೋನಾ ವಾರಿಯರ್ಸ್‌ ಗೆ ತಾ.ಪಂ. ಸದಸ್ಯೆ ಕೆ.ಟಿ. ವಲ್ಸಮ್ಮರಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಸೆ. 15. ತಾಲೂಕು ಪಂಚಾಯತ್ ಸದಸ್ಯರಾದ ಕೆ.ಟಿ. ವಲ್ಸಮ್ಮ ಇವರ ನೇತೃತ್ವದಲ್ಲಿ SSLC ಸಾಧಕರಿಗೆ ಹಾಗೂ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪಂಚಾಯತ್ ಸದಸ್ಯರಾದ ಸರ್ವೋತ್ತಮ ಗೌಡ, ಶಾಲಾ ಅಧ್ಯಕ್ಷರಾದ ಶಾಂತರಾಮ ಕುಡಾಲ, ಮುಖ್ಯ ಶಿಕ್ಷಕಿ ಶಾಂತಿ ಹಾಗೂ ಶಾಲೆಯ ಶಿಕ್ಷಕರಾದ ಗಿರೀಶ್ ಸ್ವಾಗತವನ್ನು ಮಾಡಿ, ಕಾರ್ಯಕ್ರಮವನ್ನು ಶಿಕ್ಷಕಿ ಜ್ಯೋತಿರವರು ನಿರೂಪಿಸಿದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಮಾಧವ, ವರ್ಗೀಸ್ ಅಬ್ರಹಾಂ, ಯಮುನಾ, ಅಂಗನವಾಡಿ ಮುಖ್ಯ ಶಿಕ್ಷಕಿ ತಂಗಮ್ಮ ಹಾಗೂ ಗ್ರಾಮಸ್ಥರು ಉಪ್ಪಸಿತರಿದ್ದರು.

error: Content is protected !!

Join the Group

Join WhatsApp Group