ಇನ್ನು ತಿಂಗಳಿಗೊಮ್ಮೆ ದೇಗುಲಗಳ ಹುಂಡಿ ಎಣಿಕೆ ➤ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.13:  ಇನ್ಮುಂದೆ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ಪ್ರತಿ ತಿಂಗಳು ಅಥವಾ ಹುಂಡಿ ಭರ್ತಿಯಾದ ಕೂಡಲೇ ತೆರೆದು ಕಾಣಿಕೆ ಹಣ ಎಣಿಸುವ ಪ್ರಕ್ರಿಯೆ ನಡೆಯಲಿದೆ.

ಮಂಡ್ಯ ಹೊರವಲಯದ ಅರ್ಕೆಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದಿದ್ದ ಮೂವರ ಬರ್ಬರ ಕೊಲೆ ಪ್ರಕರಣದಿಂದಾಗಿ ಎಚ್ಚೆತ್ತುಕೊಂಡಿರುವ ಮುಜರಾಯಿ ಇಲಾಖೆ, ಎಲ್ಲ ದೇಗುಲಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳಿಗೆ ಮುಂದಾಗಿದೆ. ಈ ಸಂಬಂಧ ಶನಿವಾರ ಮಂಡ್ಯದಲ್ಲಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೌಖಿಕವಾಗಿ ಆದೇಶ ನೀಡಿದ್ದಾರೆ.ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ ಸುಮಾರು 34 ಸಾವಿರ ದೇವಸ್ಥಾನ ಸೇರಿವೆ.

Also Read  ಆ.29 ಬಂಟ್ವಾಳ ತಾ.ಪಂ. ಸಾಮಾನ್ಯ ಸಭೆ

 

 

error: Content is protected !!
Scroll to Top