ಸುಬ್ರಹ್ಮಣ್ಯ: ರಸ್ತೆಯ ಅಭಿವೃಧ್ಧಿ ಕಾಮಗಾರಿಗೆ ಅಂಗಡಿಗಳ ತೆರವು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ. 28. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಮಾಸ್ಟರ್ ಪ್ಲಾನ್ ಯೋಜನೆಯಡಿ ರಸ್ತೆಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿರುವುದರಿಂದ ಇಂದು ಕೆಲ ಅಂಗಡಿಗಳನ್ನು ತೆರವುಗೊಳಿಸಲಾಯಿತು.


ಕಳೆದ ಎರಡು ತಿಂಗಳಿನಿಂದ ದೇವಸ್ಥಾನದ ರಥಬೀದಿಯ ಇಕ್ಕೆಲಗಳಲ್ಲಿ ಕಟ್ಟಡಗಳನ್ನು ತೆರವು ಮಾಡಲಾಗುತ್ತುದ್ದು, ಇದೀಗ ನಾರಾಯಣ ಅಗ್ರಹಾರ ಅವರ ವಿವೇಕಾ ಬುಕ್ ಸ್ಟಾಲ್, ಪೌಲ್ ಪಿರೇರಾ ಅವರ ಜಿನಸು ಅಂಗಡಿ, ಹೊಟೇಲ್ ತುಷಾರ್, ಸೆಲೂನ್ ಇವುಗಳ ತೆರವು ಕಾರ್ಯ ನಡೆಯುತ್ತಿದೆ.

error: Content is protected !!
Scroll to Top