ಕಾಲುವೆ ಬಿದ್ದ ವೃದ್ದೆಯನ್ನ ರಕ್ಷಿಸಿದ ಯುವಕ ➤ ಯುವಕನ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ

(ನ್ಯೂಸ್ ಕಡಬ) newskadaba.com ಬಳ್ಳಾರಿ. ಆ,24:  ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧೆಯನ್ನು ಯುವಕನೊಬ್ಬ ತನ್ನ ಪ್ರಾಣದ ಹಂಗುತೊರೆದು ರಕ್ಷಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಆರ್​ಟಿಓ ಕಚೇರಿಯ ಮುಂಭಾಗದ ಹೆಚ್​ಎಲ್​ಸಿ ಕಾಲುವೆಯಲ್ಲಿ ನಡೆದಿದೆ.

 

 

ಅಜಯ್​ ಎಂಬ ಯುವಕ ಅಜ್ಜಿಯನ್ನು ರಕ್ಷಿಸಿದ್ದಾನೆ.ಕಾಲುವೆಗೆ ಇಳಿದು ಮುಖ ತೊಳೆಯಲು ಹೋದ 70 ವರ್ಷದ ವೃದ್ಧೆ ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದು, ನೀರಿನಲ್ಲಿ ಮುಳುಗಿ ಸುಮಾರು 300 ಮೀಟರ್​ ದೂರ ನೀರಿನ ರಭಸಕ್ಕೆ ಕೊಚ್ಚಿ ಹೋಗುತ್ತಿದ್ದರು. ಅದನ್ನು ಕೆಲವು ಯುವಕರು ಗಮನಿಸಿದ್ದು, ಅದರಲ್ಲಿ ಅಜಯ್ ಎಂಬ ಯುವಕ ಕಾಲುವೆಗೆ ಜಿಗಿದು ವೃದ್ಧೆಯನ್ನು ರಕ್ಷಿಸಿದ್ದಾನೆ. ಯುವಕ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Also Read  ಗೋಮಾಂಸ ಸಾಗಾಟದ ವಾಹನಕ್ಕೆ ಬೆಂಕಿಯಿಟ್ಟು ಕಾರ್ಯಕರ್ತರಿಂದ ಆಕ್ರೋಶ

 

error: Content is protected !!
Scroll to Top