ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ಪಲ್ಟಿ, ಸವಾರೆ ತಂದೆ ಮೃತ್ಯು ➤ ಮದುವೆ ಮನೆಯಲ್ಲಿ ಸೂತಕದ ಛಾಯೆ

(ನ್ಯೂಸ್ ಕಡಬ) newskadaba.com ಕಡಬ. ಆ,24:  ಅವರು ಮನೆಯ ಹಿರಿಯ ಮಗಳ ಮದುವೆ ತಯಾರಿಯಲ್ಲಿದ್ದರು.  ದೇವಸ್ಥಾನಕ್ಕೆ ತೆರಳಿ ಹಿಂತಿರುತ್ತಿದ್ದವರಿಗೆ ಅಲ್ಲಿ ಆಗಿದ್ದೇ ಬೇರೆ,  ನಾಯಿಯೊಂದು ಅಡ್ಡ ಬಂದ ಪರಿಣಾಮ ಹೋಂಡಾ ಆಕ್ಟಿವಾ ಪಲ್ಟಿಯಾಗಿ ಹಿಂಬದಿ ಸವಾರ ಮೃತಪಟ್ಟ ಘಟನೆ ಇಂದು ಮಾಣಿ -ಮೈಸೂರು ಹೆದ್ದಾರಿಯ ಕೌಡಿಚ್ಚಾರು ಸಮೀಪದ ಸೇತುವೆ ಬಳಿ ಕಳೆದ ದಿನ ನಡೆದಿದೆ. ಮದುವೆ ಮನೆಯಲ್ಲಿಗೆ ಸೂತಕದ ಛಾಯೆ ಆವರಿಸಿದೆ.  ಮೃತಪಟ್ಟವರನ್ನು ಮಾಡ್ನೂರು ಗ್ರಾಮದ ಸಸ್ಪೇಟಿ ನಿವಾಸಿ 53 ವರ್ಷದ ಕೃಷ್ಣಪ್ಪ ನಾಯ್ಕ ಎಂದು ಗುರುತಿಸಲಾಗಿದೆ.

ಕೃಷ್ಣ ನಾಯ್ಕರು ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದು, ತನ್ನ ಮಗಳ ಜೊತೆ ಹೋಂಡಾ ಆಕ್ಟೀವಾದಲ್ಲಿ ದೇವಸ್ಥಾನಕ್ಕೆ ಹೋಗಿ ಹಿಂತಿರುಗುತ್ತಿರುವ ವೇಳೆ, ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸೇತುವೆ ಬಳಿ ತಲುಪುತ್ತಿರುವಾಗ ನಾಯಿಯೊಂದು ಏಕಾಏಕಿಯಾಗಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಆಕ್ಟೀವಾ ಗಾಡಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ವಾಹನ ಪಲ್ಟಿಯಾದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಕೃಷ್ಣಪ್ಪ ನಾಯ್ಕರ ತಲೆಗೆ ಗಂಭೀರ ಗಾಯಳಾಗಿದ್ದು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಮಂಗಳೂರಿಗೆ ಕರೆದೊಯ್ಯುತ್ತಿರುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಇನ್ನು ಸವಾರೆ, ಕೃಷ್ಣಪ್ಪ ನಾಯ್ಕರ ಪುತ್ರಿಗೆ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಮೃತ ಕೃಷ್ಣಪ್ಪ ನಾಯ್ಕರ ಹಿರಿಯ ಮಗಳಿಗೆ ಮದುವೆ ನಿಶ್ಚಿತಾರ್ಥವಾಗಿದ್ದು, ಅ. 28ರಂದು ಮದುವೆ ದಿನಾಂಕ ನಿಗದಿಯಾಗಿತ್ತು. ಮಗಳ ಮದುವೆ ತಯಾರಿಯಲ್ಲಿದ್ದ ಮನೆಯಲ್ಲಿಗೆ ಸೂತಕದ ಛಾಯೆ ಆವರಿಸಿದೆ.

 

error: Content is protected !!

Join the Group

Join WhatsApp Group