ಕಾಣಿಯೂರು : ಮನೆಯಂಗಳದ ಧರೆ ಕುಸಿತ

(ನ್ಯೂಸ್ ಕಡಬ) newskadaba.com ಕಾಣಿಯೂರು. ಆ,19:  ಮಳೆರಾಯನ ಅಬ್ಬರಕ್ಕೆ ಕರಾವಳಿ ಭಾಗಗಳಲ್ಲಿ ಈಗಾಗಲೇ ಆನೇಕ ಭಾಗಗಳ್ಲಿ ಧರೆ ಕುಸಿತಗೊಂಡಿದೆ. ಪರಿಣಾಮ ರಸ್ತೆ ಸಂಪರ್ಕ ಕಡಿತ ಸೇರಿದಂತೆ ಆನೇಕ ಮನೆಗಳು ಕುಸಿದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.

 

ಇದೀಗಾ ಕಾಣಿಯೂರಿನ ಚಾರ್ವಾಕದ ಕೆಳಗಿನಕೇರಿಯಲ್ಲಿ ಮನೆಯಂಗಳದ ಧರೆ ಕುಸಿತಗೊಂಡ ಘಟನೆ ನಡೆದಿದೆ. ದೆ. ಚಂದಪ್ಪ ಗೌಡರ ಮನೆಯಂಗಳದ ಧರೆಯು ಕುಸಿದಿದ್ದು, ನಷ್ಟ ಸಂಭವಿಸಿದೆ. ಇನ್ನು ಘಟನಾ ಸ್ಥಳಕ್ಕೆ ಬೆಳಂದೂರು ಬಿಜೆಪಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಉದನಡ್ಕ. ಗ್ರಾಮಕರಣಿಕಾರದ ಪುಷ್ಪರಾಜ್ ಕಾಣಿಯೂರು ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಮುಂದಿನ 2 ದಿನ ರಾಜ್ಯದಲ್ಲಿ ಮಳೆ ಅಬ್ಬರ !

 

 

error: Content is protected !!
Scroll to Top